masthmagaa.com:
ದೆಹಲಿಯ ಆರೋಗ್ಯ ಸಚಿವ ಸತ್ಯೆಂದರ್ ಜೈನ್ ಬಳಿಕ ನಮ್ಮ ಸಂಪುಟದ ಮತ್ತೊಬ್ಬ ಸದಸ್ಯರನ್ನೂ ಕೂಡ ಸುಳ್ಳು ಪ್ರಕರಣದಲ್ಲಿ ಸಿಲುಕಿಸೋಕೆ ತಯಾರಿ ನಡೆಸಲಾಗ್ತಿದೆ ಅಂತ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರೋ ಅವ್ರು ʻಕೇಂದ್ರ ಸರ್ಕಾರ ನಮ್ಮ ಸಂಪುಟದ ಒಬ್ಬೋಬ್ಬರೇ ಸಚಿವರನ್ನಟಾರ್ಗೆಟ್ ಮಾಡ್ತಿದೆ. ಅವರ ವಿರುದ್ದ ಸುಳ್ಳು ಪ್ರಕರಣಗಳನ್ನ ಸೃಷ್ಠಿಸಿ ಬಂದಿಸೋಕೆ ಎಲ್ಲಾ ಸಂಸ್ಥೆಗಳಿಗೂ ಆರ್ಡರ್ ಕೊಟ್ಟಿದೆ. ಈಗ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯರನ್ನ ಸಿಕ್ಕಿಸೋಕೆ ತಯಾರಿ ನಡೀತಿದೆ ಅಂತ ಮಾಹಿತಿ ಸಿಗ್ತಾಯಿದೆ. ಪ್ರಧಾನಿಯವರಲ್ಲಿ ಒಂದು ಮನವಿ ಮಾಡ್ತೀನಿ ದಯವಿಟ್ಟು ನಮ್ಮ ನ್ನೆಲ್ಲಾ ಒಂದೇ ಬಾರಿಗೆ ತನಿಖೆಗೆ ಒಳಪಡಿಸೋಕೆ ಆದೇಶ ಕೊಟ್ಬಿಡಿ, ನಾವೆಲ್ಲಾ ಆ ಮೇಲೆ ಒಟ್ಟಿಗೆ ಕೆಲಸಕ್ಕೆ ಬರಬಹುದು, ನನಗೆ ನಿಮ್ಮಂತಹ ರಾಜಕೀಯ ಗೊತ್ತಿಲ್ಲ ಅಂತ ಆಕ್ರೋಶ ಹೊರಹಾಕಿದ್ದಾರೆ.
-masthmagaa.com
Contact Us for Advertisement