masthmagaa.com:
ಭಾರಿ ಮಳೆಗೆ ಈಶಾನ್ಯ ಭಾರತದ ಮಣಿಪುರದ ಸೇನಾ ಕ್ಯಾಂಪ್ನಲ್ಲಿ ಭಾರಿ ಭೂಕುಸಿತ ಉಂಟಾಗಿದೆ. ಘಟನೆಯಲ್ಲಿ 7 ಜನ ಮೃತಪಟ್ಟಿದ್ದು, 13 ಜನ ಗಾಯಗೊಂಡಿದ್ದಾರೆ. ಕನಿಷ್ಠ 23 ಜನ ಕಾಣೆಯಾಗಿದ್ದಾರೆ ಅಂತ ವರದಿಯಾಗಿದೆ. ರಕ್ಷಣಾ ಕಾರ್ಯ ಮುಂದುವರಿದಿದೆ. ಮಣಿಪುರದ ನೋನಿ ಜಿಲ್ಲೆಯ ತುಪುಲ್ ರೈಲ್ವೆ ಸ್ಟೇಷನ್ನಲ್ಲಿ ಈ ದುರಂತ ನಡೆದಿದೆ. ಅಂದ್ಹಾಗೆ ಜಿರಿಬಾಮ್ ನಗರದಿಂದ ಮಣಿಪುರ್ ರಾಜಧಾನಿ ಇಂಫಾಲ್ಗೆ ನಿರ್ಮಿಸಲಾಗುತ್ತಿರೋ ರೈಲು ಮಾರ್ಗದ ರಕ್ಷಣೆಗಾಗಿ ಇಲ್ಲಿ ಪ್ರಾದೇಶಿಕ ಸೇನಾ ಕ್ಯಾಂಪ್ ಬಿಡಾರ ಹೂಡಿತ್ತು.
-masthmagaa.com
Contact Us for Advertisement