masthmagaa.com:
ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದ ಮಾರನೇ ದಿನವೇ ಮಧ್ಯಪ್ರದೇಶದಲ್ಲಿ ಬುಲ್ಡೋಜರ್ಗಳು ಮತ್ತೆ ಆ್ಯಕ್ಷನ್ಗೆ ಇಳಿದಿವೆ. ಬಿಜೆಪಿ ಕಾರ್ಯಕರ್ತನ ಕೈ ಕತ್ತರಿಸಿದ 5 ಆರೋಪಿಗಳ ಮನೆಯ ಹತ್ತಿರದಲ್ಲಿರೋ ಅಕ್ರಮ ಕಟ್ಟಡಗಳನ್ನ ಬುಲ್ಡೋಜರ್ಗಳು ನೆಲಸಮ ಮಾಡಿವೆ. ಮಧ್ಯಪ್ರದೇಶದ ನೂತನ ಸಿಎಂ ಆಗಿ ಮೋಹನ್ ಯಾದವ್ ಪ್ರಮಾಣ ವಚನ ಸ್ವೀಕಾರ ಮಾಡಿದ ಮರುದಿನವೇ ಈ ಬೆಳವಣಿಗೆ ಕಂಡುಬಂದಿದೆ. ಅಂದ್ಹಾಗೆ ಈ 5 ಆರೋಪಿಗಳು ಡಿಸೆಂಬರ್ 5 ರಂದು ಮಧ್ಯಪ್ರದೇಶದ ಬಿಜೆಪಿ ಕಾರ್ಯಕರ್ತ ದೇವೇಂದ್ರ ಠಾಕೂರ್ ಅವ್ರನ್ನ ಕೊಲೆ ಮಾಡೋಕೆ ಯತ್ನಿಸಿದ್ರು. ಈ ವೇಳೆ ಆರೋಪಿಗಳು ದೇವೇಂದ್ರ ಅವ್ರ ಕೈಯನ್ನ ಕತ್ತರಿಸಿ ಚೆನ್ನಾಗಿ ಥಳಿಸಿದ್ದಾರೆ. ತಕ್ಷಣವೇ ಲೋಕಲ್ ನಿವಾಸಿಯೊಬ್ರು ದೇವೇಂದ್ರ ಅವ್ರ ಸಹಾಯಕ್ಕೆ ಓಡೋಡಿ ಬಂದಿದ್ರು. ಈ ವೇಳೆ ಈ 5 ಆರೋಪಿಗಳು ಪರಾರಿಯಾಗಿದ್ದಾರೆ ಅಂತ ಪೊಲೀಸ್ ತಿಳಿಸಿದ್ದಾರೆ. ಡಿಸೆಂಬರ್ 6 ರಂದು ಪೊಲೀಸ್ ಈ ಆರೋಪಿಗಳನ್ನ ಅರೆಸ್ಟ್ ಮಾಡಿ, ಕೇಸ್ ರಿಜಿಸ್ಟರ್ ಮಾಡಿದ್ದಾರೆ.
-masthmagaa.com
Contact Us for Advertisement