ಸೇನೆ ವಿರುದ್ದ ಮಯನ್ಮಾರ್‌ ಜನರ ಸಿಟ್ಟು ಸ್ಪೋಟ!

masthmagaa.com:

ಮಯನ್ಮಾರ್​​ನಲ್ಲಿ ಸೇನೆಯ ವಿರುದ್ಧ ಭಾರೀ ದೊಡ್ಡ ಪ್ರತಿಭಟನೆ ನಡೀತಿದೆ. ನಿನ್ನೆ ಸುದ್ದಿಗೋಷ್ಟಿ ನಡೆಸಿದ್ದ ಸೇನೆ, ತಾನು ಅಧಿಕಾರ ಕಬಳಸಿರೋದಕ್ಕೆ ಜನರ ಬೆಂಬಲ ಇದೆ ಅಂತಾ ಹೇಳಿಕೊಂಡಿತ್ತು. ಹಾಗೇ ಮತ್ತೊಮ್ಮೆ ಹೊಸತಾಗಿ ಪಾರದರ್ಶಕ ಚುನಾವಣೆ ನಡೆಸಿ ಅಧಿಕಾರ ಹಸ್ತಾಂತರ ಮಾಡೋದಾಗಿ ಪ್ರಾಮಿಸ್ ಮಾಡಿತ್ತು. ಇದನ್ನ ಪ್ರಜಾಪ್ರಭುತ್ವ ಹೋರಾಟಗಾರರು, ಸೇನಾ ವಿರೋಧಿಗಳು ಅಲ್ಲಗಳೆದಿದ್ದಾರೆ. ಸೇನೆಗೆ ಜನರ ಬೆಂಬಲ ಇರೋಕೆ ಚಾನ್ಸೇ ಇಲ್ಲ.

ಬೆಂಬಲ ನಮಗೆ ಇದೆ. ಇದನ್ನ ಸಾಬೀತು ಮಾಡಿ ತೋರಿಸೋಣ ಅಂತಾ ಭಾರೀ ಪ್ರತಿಭಟನೆಗೆ ಕರೆಕೊಟ್ಟು ಬೀದಿಗೆ ಇಳಿದಿದ್ದಾರೆ. ಈ ನಡುವೆ ಅಂಗ್ ಸಾನ್ ಸೂಕಿ… ನೋಬೆಲ್ ಶಾಂತಿ ಪುರಸ್ಕಾರ ವಿಜೇತೆ ಮಯನ್ಮಾರ್​ನ ಜನ ನಾಯಕಿ. ಅವರನ್ನ ಬಂಧಿಸಿಟ್ಟಿರೋ ಸೇನೆ ಅವರ ಮೇಲೆ ಒಂದಾದ ಮೇಲೊಂದರಂತೆ ಕೇಸ್ ದಾಖಲಿಸುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾನೂನಿನ ದುರಪಯೋದ ಆರೋಪ, ಅಕ್ರಮವಾಗಿ 6 ವಾಕಿ ಟಾಕಿಗಳನ್ನ ಬಳಸಿದ ಆರೋಪ ಸೇರಿ ಕ್ಷುಲ್ಲಕ ಆರೋಪಗಳನ್ನ ಮಾಡಿ ಅಂಗ್ ಸಾನ್ ಸೂ ಕಿಯನ್ನ ಬಂಧನದಲ್ಲಿ ಇರಿಸಿದೆ.

-masthmagaa.com

Contact Us for Advertisement

Leave a Reply