masthmagaa.com:
ಇತ್ತೀಚಿಗೆ ರೈತರೊಬ್ರಿಗೆ ಪ್ರವೇಶ ನಿರಾಕರಿಸಿ ವಿವಾದಕ್ಕೀಡಾಗಿ ಕ್ಷಮೆಯಾಚಿಸಿದ್ದ ನಮ್ಮ ಮೆಟ್ರೋ ಈಗ ಮತ್ತೊಂದು ಎಡವಟ್ಟು ಮಾಡ್ಕೊಂಡಿದೆ. ಇದೀಗ ಬಟ್ಟೆ ಸರಿಯಾಗಿ ಹಾಕೊಂಡ ಬಾ, ಇಲ್ದಿದ್ರೆ ಪ್ರವೇಶವಿಲ್ಲ ಅಂತೇಳಿ ಕಾರ್ಮಿಕರೊಬ್ರನ್ನ ಮೆಟ್ರೋ ಅಧಿಕಾರಿಗಳು ಅಪಮಾನ ಮಾಡಿರೊ ಘಟನೆ ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಶರ್ಟ್ನ ಗುಂಡಿಯನ್ನ ಸರಿಯಾಗಿ ಹಾಕಿಕೊಳ್ಳದಕ್ಕೆ ಸಿಬ್ಬಂದಿ ಅಪಮಾನ ಮಾಡಿದ್ದಾರೆ ಎನ್ನಲಾಗಿದ್ದು, ಇದನ್ನು ಕಂಡ ಜನರು ಮೆಟ್ರೋ ಸಿಬ್ಬಂದಿ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-masthmagaa.com
Contact Us for Advertisement