masthmagaa.com:
ನನ್ನ ಹತ್ರ ಎಲೆಕ್ಷನ್ಗೆ ಸ್ಪರ್ಧಿಸುವಷ್ಟು ಹಣ ಇಲ್ಲ. ಹೀಗಾಗಿ ನಾನು ಈ ಬಾರಿ ಎಲೆಕ್ಷನ್ನಲ್ಲಿ ಕಂಟೆಸ್ಟ್ ಮಾಡಲ್ಲ. ಹೀಗಂತ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಬಿಜೆಪಿ ರಾಷ್ಟಾಧ್ಯಕ್ಷ ಜೆ.ಪಿ.ನಡ್ಡಾ ಅವ್ರು ನನಗೆ ಆಂಧ್ರ ಅಥ್ವಾ ತಮಿಳುನಾಡಿನಿಂದ ಲೋಕಸಭೆಗೆ ಸ್ಫರ್ಧೆ ಮಾಡಿ ಅಂತೇಳಿದ್ರು. ಆದ್ರೆ ಚುನಾವಣೆಗೆ ಸ್ಫರ್ಧೆ ಮಾಡುವಷ್ಟು ನನ್ನತ್ರ ಹಣ ಇಲ್ಲ, ಹೀಗಾಗಿ ನಾನ್ ಸ್ಪರ್ಧೆ ಮಾಡಲ್ಲ ಅಂತೇಳಿದ್ದೇನೆ ಅಂತ ನಿರ್ಮಲಾ ತಿಳಿಸಿದ್ದಾರೆ. ಇನ್ನು ದೇಶದ ಹಣಕಾಸು ಸಚಿವರ ಬಳಿ ಎಲೆಕ್ಷನ್ನಲ್ಲಿ ಸ್ಪರ್ಧೆ ಮಾಡೋವಷ್ಟು ಹಣ ಯಾಕಿಲ್ಲ ಅಂತ ಕೇಳಿರೊ ಪ್ರಶ್ನೆಗೆ ನಿರ್ಮಲಾ, ಭಾರತದ ಕನ್ಸಾಲಿಡೇಟೆಡ್ ಫಂಡ್ ನನಗೆ ಸೇರಿಲ್ಲ, ಬದಲಿಗೆ ನನಗೆ ಬರೋ ಸಂಬಳ ಮಾತ್ರ ನನ್ನದು ಅಂತೇಳಿದ್ದಾರೆ.
-masthmagaa.com
Contact Us for Advertisement