INDIA ಒಕ್ಕೂಟದ ಸಂಚಾಲಕರಾಗೋಕೆ ನಿತೀಶ್‌ ಕುಮಾರ್‌ ರೆಡಿ?

masthmagaa.com:

INDIA ಬ್ಲಾಕ್‌ ಮೂಲಕ ಪ್ರಧಾನಿ ಕನಸು ಕಂಡಿದ್ದ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಈಗ ಒಕ್ಕೂಟದ ಸಂಚಾಲಕರಾಗೋಕೆ ರೆಡಿ ಆಗಿದ್ದಾರೆ. ಒಕ್ಕೂಟದಲ್ಲಿ ಈ ಬಗ್ಗೆ ಮಾತುಕತೆ ನಡೆದಿದ್ದು, ಮುಂದಿನ ವರ್ಚುವಲ್‌ ಮೀಟಿಂಗ್‌ನಲ್ಲಿ ಈ ವಿಚಾರ ಫೈನಲ್‌ ಆಗ್ಲಿದೆ ಅಂತ ತಿಳಿದು ಬಂದಿದೆ. ಅಂದ್ಹಾಗೆ ಕಳೆದ ವಾರವಷ್ಟೇ INDIA ಒಕ್ಕೂಟದಲ್ಲಿ ಯಾವುದೇ ಹುದ್ದೆಯನ್ನೂ ಪಡೆಯೋ ಆಸೆ ಇಲ್ಲ ಅಂತ ನಿತೀಶ್‌ ಹೇಳಿದ್ರು. ಆದ್ರೆ ಇದೀಗ ಒಕ್ಕೂಟದ ಸಂಚಾಲಕರಾಗೋದು ಕನ್ಫರ್ಮ್‌ ಎನ್ನಲಾಗ್ತಿದೆ. ಈ ವಿಚಾರವನ್ನ ಖುದ್ದು ನಿತೀಶ್‌ ಕುಮಾರ್‌ ಶೀವಸೇನಾ (UBT) ಚೀಫ್‌ ಉದ್ಧವ್‌ ಠಾಕ್ರೆ ಜೊತೆ ಕೂಡ ಮಾತನಾಡಿದ್ದಾರಂತೆ. ಅಲ್ಲದೆ ಒಕ್ಕೂಟದ ಎಲ್ಲಾ ಪಕ್ಷಗಳ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸಿ ನಿರ್ಧಾರ ತಗೊಳ್ಳಾಗಿದೆ ಅಂತ ತಿಳಿದು ಬಂದಿದೆ.

-masthmagaa.com

Contact Us for Advertisement

Leave a Reply