masthmagaa.com:
ನೆರೆಯ ದೇಶಗಳಂತೆ ಭಾರತವೂ ಕೂಡ ವಿದ್ಯುತ್ ಸಮಸ್ಯೆಯನ್ನ ಎದುರಿಸುತ್ತಾ ಅನ್ನೋ ಆತಂಕ ಶುರುವಾಗಿದೆ. ಈ ಬಗ್ಗೆ ಗೃಹ ಸಚಿವ ಅಮಿತ್ ಶಾ, ಕೇಂದ್ರದ ಇನ್ನಿತರ ಸಹೋದ್ಯೋಗಿಗಳ ಜೊತೆಗೆ ಮೀಟಿಂಗ್ ನಡೆಸಿದ್ದಾರೆ. ಪವರ್ ಮಿನಿಸ್ಟರ್ ಆರ್ಕೆ ಸಿಂಗ್, ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಷಿ, ರೇಲ್ವೇ ಮಂತ್ರಿ ಅಶ್ವಿನಿ ವೈಷ್ಣವ್ ಜೊತೆಗೆ ದೇಶದಲ್ಲಿ ಲಭ್ಯವಿರುವ ಕಲ್ಲಿದ್ದಲು ಹಾಗು ವಿದ್ಯುತ್ ಸ್ಥಿತಿಗತಿ ಬಗ್ಗೆ ಚರ್ಚೆ ಮಾಡಿದ್ದಾರೆ. ಇನ್ನು ಮೀಟಿಂಗ್ ಕುರಿತು ಪ್ರತಿಕ್ರಿಯಿಸಿರೋ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, “ದೇಶದಲ್ಲಿ ಎಂಟು ವರ್ಷಗಳಿಂದ ದೊಡ್ಡ ದೊಡ್ಡ ಮಾತುಗಳನ್ನ ಆಡಿದ್ರು. ಇದರ ಫಲ ದೇಶದಲ್ಲಿ ಈಗ ಕೇವಲ ಎಂಟು ದಿನಗಳವರೆ ಬಳಸಬಹುದಾದ ಶಕ್ತಿ ಸಂಗ್ರಹ ಅಷ್ಟೇ ಇದೆ” ಅಂತ ಮೋದಿ ಸರ್ಕಾರದ ವಿರುದ್ದ ಬೆಂಕಿಯುಗುಳಿದ್ದಾರೆ. ಅಲ್ದೇ ದೇಶ ಅತೀ ಶೀಘ್ರದಲ್ಲೇ ಕಳೆದ ಅಕ್ಟೋಬರ್ನಲ್ಲಿ ಅನುಭವಿಸಿದಂತೆ ವಿದ್ಯುತ್ ಸಮಸ್ಯೆಯನ್ನ ಎದುರಿಸುತ್ತೆ. ಸಣ್ಣ ಕೈಗಾರಿಕೆಗಳು ಕರೆಂಟ್ ಸಮಸ್ಯೆಯಿಂದ ಕ್ಲೋಸ್ ಆಗ್ತವೆ. ಯವಕರು ಉದ್ಯೋಗ ಕಳ್ಕೊತ್ತಾರೆ. ಮೋದಿ ಜೀ ಬುಲ್ಡೋಜರ್ಗಳನ್ನ ಆಫ್ ಮಾಡಿ, ಪವರ್ ಪ್ಲಾಂಟ್ಗಳನ್ನ ಆನ್ ಮಾಡಿ ಅಂತ ಮೋದಿ ವಿರುದ್ದ ವಾಗ್ದಾಳಿ ಮಾಡಿದ್ದಾರೆ. ಕರೆಂಟ್ ವಿಚಾರದಲ್ಲಿ ದೇಶದ ಕಥೆ ಏನಾಗುತ್ತೋ ನೋಡಬೇಕು. ಆದ್ರೆ ಕರ್ನಾಟಕ ಮಾತ್ರ ಕರೆಂಟ್ ವಿಚಾರದಲ್ಲಿ ಸಧ್ಯಕ್ಕೆ ಸರ್ಪ್ಲಸ್ ಸ್ಟೇಟ್ ಆಗಿದೆ. ತನಗೆ ಬೇಕಾದಷ್ಟು ಕರೆಂಟ್ ಉತ್ಪತ್ತಿ ಮಾಡಿ ಬೇರೆಯವರಿಗೂ ಕೊಡುವಷ್ಟು ಈಗ ಸಧ್ಯಕ್ಕೆ ಇದೆ ಅಂತ ಅಧಿಕಾರಿಗಳು ಹೇಳ್ತಿದ್ದಾರೆ.
-masthmagaa.com
Contact Us for Advertisement