ನನಗೆ ಯಾರು ವಾರ್ನ್‌ ಮಾಡಿಲ್ಲ, ವಾರ್ನ್‌ ಮಾಡಿಸಿಕೊಳ್ಳುವಷ್ಟು ವೀಕ್‌ ಇಲ್ಲ: ಎಂಬಿ ಪಾಟೀಲ್

masthmagaa.com:

ರಾಜ್ಯದಲ್ಲಿ ಇನ್ನು 5 ವರ್ಷಗಳ ತನಕ ಸಿಎಂ ಬದಲಾವಣೆ ಇಲ್ಲ ಅಂತ ಸಚಿವ ಎಂಬಿ ಪಾಟೀಲ್‌ ಹೇಳಿದ್ದಕ್ಕೆ, ಇದೆಲ್ಲ ಬೇಡ ಅಂತ ಡಿಕೆ ಸುರೇಶ್‌ ಎಚ್ಚರಿಕೆ ಕೊಟ್ಟಿದ್ರು. ಈ ವಿಷಯ ಬಹಳ ಚರ್ಚೆಯಾಗಿತ್ತು. ಇದೀಗ ಇದಕ್ಕೆ ಪ್ರತಿಕ್ರಿಯಿಸಿರೋ, ಎಂಬಿ ಪಾಟೀಲ್‌, ನನಗೆ ಯಾರು ವಾರ್ನ್‌ ಮಾಡಿಲ್ಲ, ನಾನು ಯಾರಿಗೂ ವಾರ್ನ್‌ ಮಾಡಿಲ್ಲ. ವಾರ್ನ್‌ ಮಾಡಿಸಿಕೊಳ್ಳುವಷ್ಟು ವೀಕ್‌ ಇಲ್ಲ ಅಂತ ಹೇಳಿದ್ದಾರೆ. ನಾನು 6 ಬಾರಿ ಶಾಸಕನಾಗಿದ್ದೇನೆ, ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ನಮ್ಮ ತಂದೆ-ತಾಯಿನೇ ಒಂದೂ ದಿನ ನನಗೆ ವಾರ್ನ್ ಮಾಡಿಲ್ಲ. ವಾರ್ನಿಂಗ್ ಅನ್ನೊ ಪದ ನಮ್ಮ ಡಿಕ್ಷನರಿಯಲ್ಲೇ ಇಲ್ಲ. ವಾರ್ನಿಂಗ್ ಕೊಡ್ತೇವೆ ವಿನಃ ನಾವು ತೆಗೆದುಕೊಳ್ಳಲ್ಲ. ಎಂ.ಬಿ.ಪಾಟೀಲ್​ ಯಾರಿಗೂ ಹೆದರಲ್ಲ, ನಾನು ವಿಜಯಪುರದವನು ಎಂದಿದ್ದಾರೆ. ಜೊತೆಗೆ ವಿಧಾನಸೌಧದಲ್ಲಿ ಬಹಳ ಪ್ರೀತಿಯಿಂದ ಎಂ.ಬಿ.ಪಾಟೀಲ್​ರೇ ಅಂತಾ ಸಂಸದ ಡಿ.ಕೆ.ಸುರೇಶ್ ಕರೆದಿದ್ದು ನಿಜ. ಅವರ ಮತ್ತು ನಮ್ಮ ಸಂಬಂಧ ತುಂಬಾ ಚೆನ್ನಾಗಿದೆ. ಕಚೇರಿಯೊಳಗೆ ಬನ್ನಿ ಮಾತಾಡೋಣ ಅಂತ ಹೇಳಿ ಹೋದೆ ಅಷ್ಟೇ ಅಂತ ಸ್ಪಷ್ಟನೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply