masthmagaa.com:
ಹುಬ್ಬಳ್ಳಿಯ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನ್ ಹಿರೇಮಠ ಅವ್ರ ಪುತ್ರಿ ನೇಹಾ ಹತ್ಯೆ ಕೇಸ್ ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ವಿಚಾರವಾಗಿ ರಿಯಾಕ್ಟ್ ಮಾಡಿರೊ ಸಿಎಂ ಸಿದ್ದರಾಮಯ್ಯ, ವೈಯಕ್ತಿಕ ಕಾರಣಕ್ಕೆ ನೇಹಾ ಅವ್ರ ಕೊಲೆಯಾಗಿದೆ ಅಂತೇಳಿದ್ದಾರೆ. ಸಿಎಂ ಮಾತಿಗೆ ಪ್ರತಿಕ್ರಿಯಿ ನೀಡಿರೋ ಮೃತ ನೇಹಾ ತಂದೆ ನಿರಂಜನ್, ನಾನೊಬ್ಬ ಕಾಂಗ್ರೆಸ್ ಕಾರ್ಪೋರೇಟರ್ ಅನ್ನೊದು ಸಿಎಂ ಅವ್ರಿಗೆ ಗೊತ್ತಿರಲಿ, ನನಗೆ ಹೀಗಾದ್ರೆ ಜನ ಸಾಮಾನ್ಯರ ಕಥೆ ಏನು? ಸಿಎಂ ಯಾಕೇ ಈ ರೀತಿ ಹೇಳ್ತಿದ್ದಾರೆ? ನಮಗೂ ಅವ್ರ ಕುಟುಂಬಕ್ಕೂ ಏನ್ ಸಂಬಂಧ? ತನಿಖೆ ದಿಕ್ಕು ತಪ್ಪಿಸಬೇಡಿ, ಇದು ವೈಯಕ್ತಿಕ ಕಾರಣಕ್ಕೆ ನಡೆದಿರೊ ಕೊಲೆ ಅಲ್ಲ. ಸಿಎಂ ಹಗುರವಾದ ಹೇಳಿಕೆ ನೀಡಿದ್ರೆ ನಮ್ಮ ಮನೆತನದ ಗೌರವ ಏನಾಗ್ಬೇಕು? ಅಂತ ಸಿಎಂ ಮಾತನ್ನ ವಿರೋಧಿಸಿ ನಿರಂಜನ್ ಅಳಲು ತೊಡ್ಕೊಂಡಿದ್ದಾರೆ. ಅತ್ತ ಗೃಹ ಸಚಿವ ಜಿ. ಪರಮೇಶ್ವರ ಕೂಡ ಇದ್ರಲ್ಲಿ ನಮಗೆ ಯಾವುದೇ ಲವ್ ಜಿಹಾದ್ ಕಾಣಿಸ್ತಿಲ್ಲ.. ಇದೊಂದು ಲವ್ ಕೇಸ್. ಇಬ್ಬರ ಮಧ್ಯೆ ಲವ್ ಆಗಿ, ಯುವತಿ ಆತನನ್ನ ಅವಾಯ್ಡ್ ಮಾಡೋಕೆ ಶುರು ಮಾಡಿದ್ರಿಂದ ಹತ್ಯೆಯಾಗಿದೆ ಅಂತೇಳಿದ್ದಾರೆ. ಪರಮೇಶ್ವರ್ ಮಾತಿಗೆ ಜವಾಬ್ದಾರಿ ಸ್ಥಾನದಲ್ಲಿದ್ದು, ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಅಂತ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿವೆ. ಈ ವೇಳೆ ಮಾತನಾಡಿದ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ, ಲವ್ ಜಿಹಾದ್ ಮಾಡೋರನ್ನ, ಭಯೋತ್ಪಾದಕರನ್ನ ನೀವು ಬ್ರದರ್ಸ್ ಅಂತೇಳ್ತಿರಿ. ಈ ಸಾವು ಆಕಸ್ಮಿಕ ಅನ್ನೋಕೆ ಇದೇನು ಆಕ್ಸಿಡೆಂಟಾ? ಪ್ರೀತಿ ಮಾಡೊದಿಲ್ಲ ಅಂದ್ರೆ ಕೊಲೆ ಮಾಡ್ಬೇಕಾ? ಗೃಹ ಸಚಿವರು ತಮ್ಮ ಹೇಳಿಕೆಗೆ ತಕ್ಷಣವೇ ಕ್ಷಮೆಯಾಚಿಸಬೇಕು ಅಂತ ಮಹೇಶ್ ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಕಾರ್ಮಿಕ ಖಾತೆ ಸಚಿವ ಸಂತೋಷ್ ಲಾಡ್ ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದು, ಇಂತಹ ಕೇಸ್ಗಳಲ್ಲಿ ಆರೋಪಿಗಳನ್ನ ಎನ್ಕೌಂಟರ್ ಮಾಡೋ ಕಾನೂನು ಜಾರಿಯಾಗ್ಬೇಕು ಅಂತೇಳಿದ್ದಾರೆ. ಮತ್ತೊಂದೆಡೆ ನೇಹಾ ಹತ್ಯೆ ಖಂಡಿಸಿ ಹಾಗೂ ಆರೋಪಿಯನ್ನ ಗಲ್ಲಿಗೇರಿಸ್ಬೇಕು ಅಂತ ಒತ್ತಾಯಿಸಿ, ಹುಬ್ಬಳ್ಳಿ, ಬೆಂಗಳೂರು, ಬೆಳಗಾವಿ, ರಾಯಚೂರು ಸೇರಿದಂತೆ ರಾಜ್ಯದ ಹಲವೆಡೆ ಎಬಿವಿಪಿ ಸಂಘಟನೆ ಬೃಹತ್ ಪ್ರತಿಭಟನೆ ನಡೆಸಿದೆ. ಆರೋಪಿ ಫಯಾಜ್ನ ಹುಟ್ಟೂರು ಸವದತ್ತಿ ಬಳಿಯ ಮುನವಳ್ಳಿಯಲ್ಲೂ ಭಾರಿ ಪ್ರತಿಭಟನೆ ನಡೆದಿದೆ. ಇನ್ನು ಮೃತ ನೇಹಾ ಹಾಗೂ ಹಂತಕ ಫಯಾಜ್ ಜೊತೆಗಿದ್ದ ರೀಲ್ಸ್ಗಳು ಈಗ ವೈರಲ್ ಆಗಿವೆ. ಅಲ್ಲದೆ ಹುಬ್ಬಳ್ಳಿಯ BVB ಕಾಲೇಜಿನಲ್ಲಿ ಆರೋಪಿ ಫಯಾಜ್ ಮೃತ ನೇಹಾಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ವೀಡಿಯೋ ಕೂಡ ವೈರಲ್ಲಾಗಿದೆ. ಇನ್ನು ಈ ಬಗ್ಗೆ ಮಾತನಾಡಿರೋ ಡಿಸಿಎಂ ಡಿಕೆ ಶಿವಕುಮಾರ್, ಕಾನೂನಿನ ಪ್ರಕಾರ ತಪ್ಪಿತಸ್ಥತ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮ ತಗೊಳ್ಳಲಾಗುತ್ತೆ. ಈ ಕೇಸ್ನಲ್ಲಿ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಲಾಗುತ್ತೆ ಅಂದಿದ್ದಾರೆ.
-masthmagaa.com
Contact Us for Advertisement