masthmagaa.com:
ಅಯೋಧ್ಯೆ ಶ್ರೀರಾಮ ಮಂದಿರದ ಪ್ರತಿಷ್ಠಾಪನೆ ಹತ್ರವಾಗ್ತಿದ್ಹಾಗೆ, ʻಈ ವಿಚಾರವನ್ನ ನಾವು ರಾಜಕೀಯಗೊಳಿಸೋದಿಲ್ಲʼ ಅಂತ ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ʻರಾಮ ಮಂದಿರದ ಬಗ್ಗೆ ನಾನೇನೂ ಹೇಳಲ್ಲ. ಇಂಥಹ ಉದ್ಘಾಟನಾ ಕಾರ್ಯಕ್ರಮಗಳು ಇದೇನು ಮೊದಲು ನಡೆಯೋದಲ್ಲ, ಈ ಹಿಂದೆಯೂ ನಡೆದಿರೋದನ್ನ ನಾನು ನೋಡಿದ್ದೀನಿ. ಈ ವಿಚಾರ ರಾಜಕೀಯಗೊಳಿಸ್ಬೇಕೋ ಬೇಡ್ವೋ ಅನ್ನೋದು ನಿಮಗೆ ಬಿಟ್ಟಿದ್ದು. ನಾನು ರಾಜಕೀಯಗೊಳಿಸಲ್ಲʼ ಅಂತ ಹೇಳಿಕೆ ನೀಡಿದ್ದಾರೆ. ಇನ್ನು ರಾಮಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಇನ್ವೈಟ್ ಮಾಡಿದ್ರೆ ಹೋಗ್ತಿರಾ ಅಂತ ಅವ್ರನ್ನ ಪ್ರಶ್ನಿಸಲಾಯ್ತು. ಇದಕ್ಕೆ ರಿಯಾಕ್ಟ್ ಮಾಡಿದ ಒಮರ್ ಅಬ್ದುಲ್ಲಾ, ʻನನ್ನನ್ನ ಇನ್ವೈಟ್ ಮಾಡೋಕೆ ಸಾಧ್ಯಾನೇ ಇಲ್ಲ. ಇನ್ವೈಟ್ ಮಾಡಬೇಕಾದವ್ರಿಗೆ ಈಗಾಗ್ಲೇ ಆಮಂತ್ರಣ ಪತ್ರಿಕೆ ಕಳುಹಿಸಲಾಗಿದೆʼ ಅಂತ ಹೇಳಿದ್ದಾರೆ.
-masthmagaa.com
Contact Us for Advertisement