ಕತಾರ್‌ನಲ್ಲಿ ಬಂಧಿಯಾಗಿರೋ ಸೈನಿಕರನ್ನ ಭೇಟಿ ಮಾಡಿದ ಅಧಿಕಾರಿಗಳು! ಮುಂದೇನು?

masthmagaa.com:

ಕತಾರ್‌ನಲ್ಲಿ ಗೂಢಚಾರಿಕೆ ಆರೋಪದಲ್ಲಿ ಮರಣದಂಡನೆಗೆ ಒಳಗಾಗಿರೊ 8 ಮಂದಿ ಮಾಜಿ ಭಾರತೀಯ ಸೈನಿಕರ ಜೊತೆ ಸಂಪರ್ಕ ಸಾಧಿಸಲಾಗಿದೆ ಅಂತ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂಧಮ್‌ ಬಗ್ಚಿ ಹೇಳಿದ್ದಾರೆ. ʻಡಿಸೆಂಬರ್‌ 3ರಂದು ನಮ್ಮ ರಾಯಭಾರಿಗೆ ಎಲ್ಲಾ 8 ಮಂದಿಯನ್ನ ಭೇಟಿ ಮಾಡೋಕೆ ಅನುಮತಿ ಸಿಕ್ಕಿತ್ತು. ಅದರಂತೆ ಸೈನಿಕರ ಜೊತೆ ಮಾತನಾಡಲಾಗಿದೆ. ಕತಾರ್‌ ಕೋರ್ಟ್‌ನಲ್ಲಿ ನಾವು ಅಪೀಲ್‌ ಸಲ್ಲಿಸಿದ ಮೇಲೆ ಇದುವರೆಗೆ ಎರಡು ಬಾರಿ ವಿಚಾರಣೆ ನಡೆದಿದೆ. ಇದು ಸೂಕ್ಷ್ಮವಾದ ವಿಚಾರವಾಗಿದ್ದು, ನಾವು ಹತ್ತಿರದಿಂದ ಮಾನಿಟರ್‌ ಮಾಡ್ತಿದ್ದೇವೆ. ಕೇಸ್‌ಗೆ ಸಂಬಂಧಿಸಿದಂತೆ ನಮ್ಮ ಕೈಲಾದಷ್ಟು ಮಾಹಿತಿಗಳನ್ನ ಶೇರ್‌ ಮಾಡಲಿದ್ದೇವೆʼ ಅಂದಿದ್ದಾರೆ.

-masthmagaa.com

Contact Us for Advertisement

Leave a Reply