masthmagaa.com:
ಎಕ್ಸಿಟ್ ಪೋಲ್ನಲ್ಲಿ ಕಾಂಗ್ರೆಸ್ಗೆ ಮುನ್ನಡೆ ಬಂದಿದ್ದರ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಕಳೆದ ಬಾರಿಯೂ ಮತದಾನೋತ್ತರ ಸಮೀಕ್ಷೆಗಳು ಕಾಂಗ್ರೆಸ್ಗೆ ಹೆಚ್ಚು ಸ್ಥಾನಗಳನ್ನ ಗಳಿಸುತ್ತೆ ಅಂತ ಹೇಳಿದ್ದವು. ಆದ್ರೆ ಫಲಿತಾಂಶದ ದಿನ ಅದು ಉಲ್ಟಾ ಆಯಿತು. ಅದೇ ರೀತಿ ಈ ಬಾರಿಯೂ ಕೂಡ ಆಗಲಿದೆ. ಪ್ರಧಾನಿ ಮೋದಿ ರಾಜ್ಯಕ್ಕೆ ಬಂದು ಪ್ರಚಾರ ಮಾಡಿದ್ದು ನಮಗೆ ಪ್ಲಸ್ ಆಗಿದೆ. ನಾವು ಸಂಪೂರ್ಣ ಬಹುಮತದಿಂದ ಮತ್ತೆ ಅಧಿಕಾರಕ್ಕೆ ಬರ್ತೇವೆ ಅನ್ನೊ ವಿಶ್ವಾಸವಿದೆ ಅಂತ ಹೇಳಿದ್ದಾರೆ. ಇದೇ ವೇಳೆ ನಾನು 150 ಸ್ಥಾನಗಳನ್ನ ಗೆಲ್ತೀವಿ ಅಂತ ಎಲ್ಲಿಯೂ ಹೇಳಿಲ್ಲ. ನಮಗೆ ಬಹುಮತ ಬರುತ್ತೆ ಅಂತ ಹೇಳಿದ್ದೇನೆ. ಈಗಲೂ ಆ ಹೇಳಿಕೆ ನಾನು ಬದ್ಧವಾಗಿದ್ದೇನೆ. ಅತಂತ್ರ ಫಲಿತಾಂಶ ಬರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಅಂತ ಸಿಎಂ ತಿಳಿಸಿದ್ದಾರೆ. ಈ ಕಡೆ 31 ಸಾವಿರ ಬೂತ್ಗಳಲ್ಲಿ ಬಿಜೆಪಿ ಲೀಡ್ನಲ್ಲಿದೆ ಅಂತ ಬಿಎಲ್ ಸಂತೋಷ್ ಮಾಹಿತಿ ಹಂಚಿಕೊಂಡಿದ್ದಾರೆ. ಇದೆಲ್ಲದ್ರ ಮಧ್ಯೆ ಎಲೆಕ್ಷ್ನ್ ಮುಗಿಸಿ ಮಾಜಿ ಸಿಎಂ ಕುಮಾರಸ್ವಾಮಿ ವಿದೇಶಕ್ಕೆ ಹಾರಿದ್ದಾರೆ. ಸಿಂಗಪೂರ್ಗೆ ಆರೋಗ್ಯ ತಪಾಸಣೆಗೆ ಹೋಗಿರೋ ಮಾಹಿತಿ ಲಭ್ಯವಾಗಿದೆ.
-masthmagaa.com
Contact Us for Advertisement