masthmagaa.com:
ಪಾಕಿಸ್ತಾನದ ಜೊತೆಗಿನ ಕ್ರಿಕೆಟ್ ಪಂದ್ಯಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರೋಧ ವ್ಯಕ್ತಪಡಿಸಿದ್ದಾರೆ. ಜಮ್ಮು ಕಾಶ್ಮೀರದಲ್ಲಿ 9 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಪಾಕಿಸ್ತಾನ ಪ್ರತಿದಿನ ಕಾಶ್ಮೀರದಲ್ಲಿ ಜನರ ಜೊತೆ ಟಿ20 ಆಡ್ತಿದೆ. ಹೀಗಿರುವಾಗ ಅಕ್ಟೋಬರ್ 24ರಂದು ಅದೇ ಪಾಕಿಸ್ತಾನದೊಂದಿಗೆ ಭಾರತ ಟಿ20 ಕ್ರಿಕೆಟ್ ಆಡ್ತಿದೆ. ಅಂಥ ಪಾಕ್ ಜೊತೆ ಕ್ರಿಕೆಟ್ ಬೇಕಾ ಅಂತ ಪ್ರಶ್ನಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ 2 ವಿಚಾರಗಳ ಬಗ್ಗೆ ಯಾವತ್ತೂ ಮಾತಾಡಲ್ಲ. ಒಂದು ಪೆಟ್ರೋಲ್, ಡೀಸೆಲ್ ದರ ಏರಿಕೆ.. ಮತ್ತೊಂದು ಲಡಾಕ್ನಲ್ಲಿ ನಮ್ಮ ಭಾಗದಲ್ಲಿ ಚೀನಾ ಬಂದು ಕೂತಿರೋದು. ಈ 2 ವಿಚಾರಗಳ ಬಗ್ಗೆ ಮೋದಿ ಮೌನ ವಹಿಸಿದ್ದಾರೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement