ನಿಮ್ಮನ್ನು ಯಾರು ರಕ್ಷಿಸ್ತಾರೆ? ಖಾಕಿ ಬಗ್ಗೆ ಓವೈಸಿ ಹೇಳಿಕೆ ವೈರಲ್!

masthmagaa.com:

ಎಐಎಂಐಎಂ ಪಕ್ಷದ ಅಸಾದುದ್ದೀನ್ ಓವೈಸಿಯ ಹೇಳಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಕಾನ್ಪುರದಲ್ಲಿ ಮಾತಾಡಿದ್ದ ಅವರು, ರಸೂಲಾಬಾದ್​​ ಪೊಲೀಸ್ ಠಾಣೆಯಲ್ಲಿ 80 ವರ್ಷದ ರಫೀಕ್ ಅನ್ನೋ ವೃದ್ಧನನ್ನು ಕರ್ಕೊಂಡು ಹೋಗಿ ಪೊಲೀಸರು ಹಿಂಸಿಸಿದ್ದಾರೆ. ಪೊಲೀಸರೇ.. ಯೋಗಿ ಆದಿತ್ಯನಾಥ್ ಯಾವಾಗಲೂ ಸಿಎಂ ಆಗಿರೋದಿಲ್ಲ. ಮೋದಿ ಯಾವಾಗಲೂ ಪ್ರಧಾನಿಯಾಗಿರೋದಿಲ್ಲ. ನಾವು ಮುಸಲ್ಮಾನರು ಈಗ ಸುಮ್ಮನಿದ್ದೀವಿ ನಿಜ. ಆದ್ರೆ ನಿಮ್ಮ ಈ ಅನ್ಯಾಯವನ್ನು ಯಾವತ್ತೂ ಮರೆಯೋದಿಲ್ಲ. ಅಲ್ಲಾ ಅವರ ತಾಕತ್ತಿನಿಂದಲೇ ನಿಮ್ಮನ್ನು ನಾಶ ಮಾಡ್ತಾರೆ. ಸಮಯ ಬದಲಾಗುತ್ತೆ. ಆಗ ಯೋಗಿ ಆದಿತ್ಯನಾಥ್ ಮಠಕ್ಕೆ ಹೋಗ್ತಾರೆ. ಮೋದಿ ಪರ್ವತ ಏರಿ ಹೋಗ್ತಾರೆ. ಆಗ ನಿಮ್ಮನ್ನು ಕಾಪಾಡಕ್ಕೆ ಯಾರು ಬರ್ತಾರೆ ಅಂತ ಪ್ರಶ್ನಿಸಿದ್ದಾರೆ. ಇದು ವೈರಲ್ ಆಗ್ತಿದ್ದಂತೆ ಸ್ಪಷ್ಟನೆ ಇಳಿದ ಓವೈಸಿ, ನಾನು ಪೊಲೀಸರು ಮಾಡಿದ ಅನ್ಯಾಯವನ್ನು ಹೇಳಿ ನಂತರ ಈ ಮಾತು ಹೇಳಿದ್ದೆ. ನಾನು ಅಲ್ಲಿ ಯಾವುದೇ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿರಲಿಲ್ಲ.. ಆದ್ರೆ ವಿಡಿಯೋ ಎಡಿಟ್ ಮಾಡಿ ಹಬ್ಬಿಸಲಾಗ್ತಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply