masthmagaa.com:
ನಿರಂತರವಾಗಿ ಗಲಾಟೆ, ಗದ್ದಲ ಮಾಡಿ ಸದನದ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ವಿಪಕ್ಷಗಳ ವಿರುದ್ಧ ಪ್ರಧಾನಿ ಮೋದಿ ಕಿಡಿಕಾರಿದ್ದಾರೆ. ಬಿಜೆಪಿಯ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ವಿಪಕ್ಷಗಳ ವರ್ತನೆಯಿಂದ ಸದನಕ್ಕೆ ಅಪಮಾನವಾಗ್ತಿದೆ. ನಿರಂತರವಾಗಿ ಕಲಾಪ ಮುಂದೂಡಿಕೆಯಾಗ್ತಿರೋದು ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಜನರಿಗೆ ಮಾಡಲಾಗ್ತಿರೋ ಅಪಮಾನ ಅಂತ ಹೇಳಿದ್ದಾರೆ. ಇದೇ ವೇಳೆ ಸದನದಲ್ಲಿ ಸಚಿವರ ಕೈಲಿದ್ದ ಪೇಪರ್ ಕಸಿದು ಹರಿದು ಹಾಕಿದ ಟಿಎಂಸಿ ಸಂಸದ ಶಾಂತನು ಸೇನ್ ಮತ್ತು ಮಸೂದೆಗಳಿಗೆ ಪಪ್ಡಿ ಚಾಟ್ ಅಂತ ಕರೆದ ಡೆರೆಕ್ ಒಬ್ರಿಯಾನ್ ಹೇಳಿಕೆಗೂ ಬೇಸರ ವ್ಯಕ್ತಪಡಿಸಿದ್ರು.
-masthmagaa.com
Contact Us for Advertisement