‌ಸನಾತನ ಧರ್ಮ ನಿಂದನೆ ಕೇಸ್: ಉದಯ್‌ನಿಧಿ ಸ್ಟಾಲಿನ್‌ಗೆ ಸಮನ್ಸ್‌!

masthmagaa.com:

ತಮಿಳುನಾಡು ಸಿಎಂ ಎಮ್‌ಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್‌ ಕಳೆದ ವರ್ಷ ಸನಾತನ ಧರ್ಮವನ್ನ ಡೇಂಗ್ಯೂ, ಮಲೇರಿಯ ತರ ನಿರ್ನಾಮ ಮಾಡ್ಬೇಕು ಅಂತೇಳಿ ವಿವಾದ ಸೃಷ್ಟಿಸಿದ್ರು. ಇದೇ ವಿಚಾರವಾಗಿ ಈಗ ಬಿಹಾರ್‌ ಸ್ಪೆಷಲ್‌ ಕೋರ್ಟ್‌ ಉದಯನಿಧಿ ಸ್ಟಾಲಿನ್‌ಗೆ ಜನವರಿ 15 ರಂದು ಸಮನ್ಸ್‌ ನೀಡಿದೆ. ಈ ಪ್ರಕಾರ ಫೆಬ್ರುವರಿ 13ಕ್ಕೆ ಸ್ಪೆಷಲ್‌ ಕೋರ್ಟ್‌ ಮುಂದೆ ವಿಚಾರಣೆಗೆ ಹಾಜರಾಗೋಕೆ ಸೂಚನೆ ನೀಡಲಾಗಿದೆ. ಅಂದ್ಹಾಗೆ ಉದಯನಿಧಿ ವಿರುದ್ಧ ಪಾಟ್ನಾ ಹೈಕೋರ್ಟ್‌ನ ವಕೀಲರೊಬ್ರು ಕ್ರಿಮಿನಲ್‌ ಕೇಸ್‌ ಫೈಲ್‌ ಮಾಡಿದ್ರು. ಈ ಬೆನ್ನಲ್ಲೇ ಸಮನ್ಸ್‌ ನೀಡಲಾಗಿದೆ.

-masthmagaa.com

Contact Us for Advertisement

Leave a Reply