masthmagaa.com:
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸಾಗರ ಭದ್ರತೆ ಸಂಬಂಧ ನಡೆದ ಓಪನ್ ಡಿಬೇಟ್ನಲ್ಲಿ ಪ್ರಧಾನಿ ಮೋದಿ ಮಾತನಾಡಿದ್ರು. ಸಾಗರ ವ್ಯಾಪಾರದಲ್ಲಿನ ಅಡೆತಡೆಗಳಿಗೆ ಕಡಿವಾಣ ಹಾಕಬೇಕು. ಕಡಲ್ಗಳ್ಳತನ ತಡೆಯಬೇಕು ಅಂದ್ರು. ಅದೇ ರೀತಿ ಸಾಗರದ ವಾತಾವರಣ ಕಾಪಾಡಬೇಕು. ಅಲ್ಲಿ ಪ್ಲಾಸ್ಟಿಕ್ ಎಲ್ಲಾ ಎಸೀಬಾರ್ದು ಅಂತ ಕೂಡ ಕರೆಕೊಟ್ರು. ಈ ರೀತಿ ಡಿಬೇಟ್ಗೆ ಅಧ್ಯಕ್ಷತೆ ವಹಿಸಿದ ಮೊದಲ ಪ್ರಧಾನಿ ಮೋದಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಗಸ್ಟ್ ತಿಂಗಳ ಅವಧಿಗೆ ಭಾರತ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನು ಹೊಂದಿದೆ. ಶಾಂತಿ ಮತ್ತು ಭಯೋತ್ಪಾದನೆ ನಿಗ್ರಹದ ಸಂಬಂಧ ಭಾರತ ಇನ್ನೂ ಎರಡು ಸಭೆಗಳನ್ನು ನಡೆಸಲಿದೆ.
-masthmagaa.com
Contact Us for Advertisement