masthmagaa.com:
ಪ್ರಧಾನಿ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ರನ್ನ ಹತ್ಯೆ ಮಾಡೊದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿ ಮೇಲೆ FIR ದಾಖಲಾಗಿದೆ. ಯಾದಗಿರಿ ಮೂಲದ ಸುರಪುರದ ಮೊಹಮ್ಮದ್ ರಸೂಲ್ ಅನ್ನೋ ಈತ, ಹೈದ್ರಾಬಾದ್ನಲ್ಲಿ ಕೂಲಿ ಕೆಲ್ಸ ಮಾಡ್ಕೊಂಡಿದ್ದ ಅಂತ ಗೊತ್ತಾಗಿದೆ. ಈತ ಇತ್ತೀಚಿಗೆ ಫೆಸ್ಬುಕ್ನಲ್ಲಿ ಪಿಎಂ ಹಾಗೂ ಯೋಗಿ ಬಗ್ಗೆ ಆಕ್ಷೇಪಾರ್ಹ ಪದ ಬಳಸಿ ಅವ್ರನ್ನ ಹತ್ಯೆ ಮಾಡೊದಾಗಿ ಹೇಳಿದ್ದ. ಬಳಿಕ ತಲೆಮರಿಸಿಕೊಂಡಿದ್ದ ಈತನ ವಿರುದ್ದ ಸ್ಥಳೀಯರು ಸುರಪುರ ಪೋಲಿಸರಿಗೆ ದೂರು ಕೊಟ್ಟಿದ್ರು. ಇದೀಗ ಇವ್ನ ವಿರುದ್ದ FIR ದಾಖಲಿಸಿರೋ ಪೋಲಿಸರು ಬಂಧನಕ್ಕಾಗಿ ಹುಡುಕಾಟ ನಡೆಸಿದ್ದೇವೆ ಅಂತೇಳಿದ್ದಾರೆ.
-masthmagaa.com
Contact Us for Advertisement