ರಾಜ್ಯಸಭೆಗೆ ಸುಧಾಮೂರ್ತಿ ನಾಮನಿರ್ದೆಶನ: ಮೋದಿ ಸಂತಸ!

masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಲೇಖಕಿ, ಆಂಟ್ರಪ್ರನೋರ್‌ ಅಥವಾ ವಾಣಿಜ್ಯೋಧ್ಯಮಿ ಸುಧಾ ಮೂರ್ತಿ.. ಇನ್ಫೋಸಿಸ್‌ ನಾರಾಯಣ ಮೂರ್ತಿಯವ್ರ ಪತ್ನಿ ಸುಧಾಮೂರ್ತಿಯವ್ರನ್ನ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಖುದ್ದು ಪಿಎಂ ಮೋದಿ ಈ ವಿಚಾರವನ್ನ ಘೋಷಣೆ ಮಾಡಿದ್ದು, ಶಿಕ್ಷಣ ಸೇರಿದಂತೆ ಇತರ ಸಾಮಾಜಿಕ ಕಾರ್ಯಗಳಲ್ಲಿ ಸುಧಾ ಮೂರ್ತಿ ಅವ್ರ ಕೊಡುಗೆ ಅಪಾರ. ಅವ್ರನ್ನ ಈಗ ರಾಜ್ಯಸಭೆಗೆ ನಾಮಿನೇಟ್‌ ಮಾಡಲಾಗ್ತಿದೆ ಅಂತೇಳಿ ಅಭಿನಂದನೆ ಸಲ್ಲಿಸಿದ್ದಾರೆ.

ಲೋಕಸಭೆ ಹಾಗೂ ವಿಧಾನಸಭೆ ಎಲೆಕ್ಷನ್‌ಗೆ ಮುಹೂರ್ತ ನಿಗದಿಯಾಗೋ ಹೊತ್ತಲ್ಲೇ ಆಂಧ್ರಪ್ರದೇಶದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗೊ ತರ ಕಾಣ್ತಿದೆ. ಮಾಜಿ ಸಿಎಂ ಚಂದ್ರ ಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಾರ್ಟಿ ಮತ್ತೆ ಬಿಜೆಪಿ ನೇತೃತ್ವದ NDA ಮೈತ್ರಿಕೂಟದ ಭಾಗವಾಗೊಕೆ ತಯಾರಾಗಿರೋ ಸುಳಿವು ಸಿಕ್ಕಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮೀತ್‌ ಶಾ ಅವ್ರನ್ನ ಚಂದ್ರ ಬಾಬು ನಾಯ್ಡು ಮೀಟ್‌ ಮಾಡಿ ಮಾತುಕತೆ ನಡೆಸಿದ್ದಾರೆ ಅಂತ ಗೊತ್ತಾಗಿದೆ.

ಇನ್ನೊಂದೆಡೆ ಅಚ್ಚರಿಯ ರಾಜಕೀಯ ಬೆಳವಣಿಗೆಯಲ್ಲಿ ಟೀಮ್‌ ಇಂಡಿಯಾ ಸ್ಟಾರ್‌ ವೇಗಿ, 2023ರ ಏಕದಿನ ವಿಶ್ವಕಪ್‌ ಸ್ಟಾರ್ ಮೊಹಮ್ಮದ್‌ ಶಮಿ ಬಿಜೆಪಿ ಸೇರಲಿದ್ದಾರೆ ಅನ್ನೊ ವಿಚಾರ ಕೇಳಿ ಬರ್ತಿದೆ. ಅಷ್ಟೇ ಅಲ್ಲ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಿಂದ‌ ಶಮಿ ಸ್ಫರ್ಧೆ ಮಾಡಲಿದ್ದಾರೆ ಅಂತೇಳಲಾಗ್ತಿದೆ. ಈ ಸಂಬಂಧ ಶಮಿ, ಗೃಹ ಸಚಿವ ಅಮಿತ್‌ ಶಾರನ್ನ ಮೀಟ್‌ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗ್ತಿದೆ. ಸದ್ಯ ಗಾಯದ ಸಮಸ್ಯೆಯಿಂದ ಬಳಲ್ತಿರೊ ಶಮಿ ಟೀಮ್‌ ಇಂಡಿಯಾ ಪರ ಯಾವುದೇ ಟೂರ್ನಿ ಆಡ್ತಿಲ್ಲ. ಅಲ್ದೇ ಈ ಬಾರಿ ಐಪಿಎಲ್‌ ಕೂಡ ಆಡಲ್ಲ ಅಂತ ಶಮಿ ಸ್ಪಷ್ಟ ಪಡಿಸಿರೋ ಟೈಮಲ್ಲಿ ಈ ವಿಚಾರ ಇನ್ನಷ್ಟು ಮಹತ್ವ ಪಡ್ಕೊಳ್ತಿದೆ.

-masthmagaa.com

Contact Us for Advertisement

Leave a Reply