masthmagaa.com:
ಚುನಾವಣೆ ಟೈಮಲ್ಲೇ ಪ್ರಧಾನಿ ಮೋದಿ ಮುಂದಿನ ಅವಧಿಯ ಕುರಿತಾಗಿ ದೊಡ್ಡ ಹೇಳಿಕೆ ನೀಡಿದ್ದಾರೆ. ಮುಂದಿನ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂದಿರೋ ಮೋದಿ, ಮುಂದಿನ ಅವಧಿಯ ಮೊದಲ 100 ದಿನಗಳಲ್ಲಿ ದೊಡ್ಡ ನಿರ್ಧಾರಗಳನ್ನ ತಗೊಳ್ಳೋದಕ್ಕೆ ಎದುರು ನೋಡ್ತಿದ್ದೇವೆ ಅಂದಿದ್ದಾರೆ. ಮೀರತ್ನ ಬಿಜೆಪಿ ರ್ಯಾಲಿಯಲ್ಲಿ ಈ ರೀತಿ ಹೇಳಿರೋ ಪಿಎಂ ಮೋದಿ, ನಾವು ದೇಶವನ್ನ ಇನ್ನೂ ಮುಂದಕ್ಕೆ ತಗೊಂಡೋಗ್ಬೇಕು ಅಂದಿದ್ದಾರೆ. ನಂತರ ವಿಪಕ್ಷಗಳ ವಿರುದ್ಧ ಗುಡುಗಿರೋ ಮೋದಿ, ನಾನು ಭ್ರಷ್ಟಾಚಾರದ ವಿರುದ್ಧ ಕ್ರಮ ತಗೊಂಡ್ರೆ ಕೆಲವರಿಗೆ ಕಷ್ಟ ಆಗ್ತಿದೆ. ನಾನು ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡ್ತಿರೋದಕ್ಕೇನೆ ಕೆಲವರು ಈಗ ಕಂಬಿ ಹಿಂದಿದ್ದಾರೆ. ಮೋದಿಯ ʻಮಂತ್ರ ಭ್ಟಷ್ಟಾಚಾರ್ ಹಠಾವೋʼ ಅಂತಾದ್ರೆ, ಅವರ ಮಂತ್ರ ಭ್ರಷ್ಟಾಚಾರ್ ಬಚಾವೋ ಅಂತ. ನಾವು ಭ್ರಷ್ಟಾಚಾರ ತಡೆಯೋದ್ರ ಜೊತೆಗೆ, ಜನರ ಹಣವನ್ನ ಅವರಿಗೆ ವಾಪಸ್ ತಲುಪಿಸ್ತಿದ್ದೇವೆ ಅಂದಿದ್ದಾರೆ. ಜೊತೆಗ ಮತ್ತೊಂದ್ ಕಡೆ ಟಿವಿ ಸಂದರ್ಶನ ಒಂದ್ರಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವ್ರಿಗೆ, ಬಿಜೆಪಿಗೆ ಕಳಂಕ ಹೊತ್ತವರನ್ನೂ ಕರ್ಕೋತೀರಾ ಅಂತ ಕೇಳಿದಾಗ ನಮ್ಮ ಪಕ್ಷ ಎಲ್ಲರಿಗು ಮುಕ್ತವಾಗಿದೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement