masthmagaa.com:
ನಟ ಪುನೀತ್ ರಾಜ್ಕುಮಾರ್ ಅವರ ಪಾರ್ಥಿವ ಶರೀರವನ್ನ ಇವತ್ತು ಕೂಡ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಸಾಗರೋಪಾದಿಯಲ್ಲಿ ಬಂದ ಸಾವಿರಾರು, ಲಕ್ಷಾಂತರ ಜನ ಅಪ್ಪು ಅವರ ಅಂತಿಮ ದರ್ಶನ ಪಡೆದ್ರು. ಇದೆಲ್ಲದರ ನಡುವೆ ಎಲ್ಲರೂ ಇವತ್ತು ಕಾಯ್ತಾ ಇದ್ದಿದ್ದು ಪುನೀತ್ ಅವರ ದೊಡ್ಡ ಮಗಳು ದ್ರಿತಿಗೆ. ಅಮೆರಿಕದಲ್ಲಿ ವ್ಯಾಸಂಗ ಮಾಡ್ತಿದ್ದ ದ್ರಿತಿ ತಂದೆಯ ಸಾವಿನ ಸುದ್ದಿ ಕೇಳಿ ಅಲ್ಲಿಂದ ಭಾರತಕ್ಕೆ ಹೊರಟಿದ್ರು. ಅಮೆರಿಕದಿಂದ ಇವತ್ತು ಮಧ್ಯಾಹ್ನ 12 ಗಂಟೆ ಸುಮಾರಿಗೆ ದೆಹಲಿ ಏರ್ಪೋರ್ಟ್ಗೆ ಬಂದಿಳಿದ್ರು. ಅಲ್ಲಿಂದ ಬೆಂಗಳೂರು ಫ್ಲೈಟ್ ಹತ್ತಿ ಸಂಜೆ ಸುಮಾರು 4 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ್ರು. ಅವರನ್ನ ಪೊಲೀಸ್ ಎಸ್ಕಾರ್ಟ್ ಮೂಲಕ ಏರ್ಪೋರ್ಟ್ನಿಂದ ಸದಾಶಿವನಗರದ ನಿವಾಸಕ್ಕೆ ಕರೆತರಲಾಯ್ತು. ಅಲ್ಲಿಂದ ಕಂಠೀರವ ಸ್ಟೇಡಿಯಂಗೆ ಬಂದ ದ್ರಿತಿ ಸಂಜೆ 5.50ಕ್ಕೆ ತಂದೆಯ ಪಾರ್ಥಿವ ಶರೀರವನ್ನ ನೋಡಿ ಕಣ್ಣೀರಿಟ್ಟರು. ಪಾರ್ಥಿವ ಶರೀರಕ್ಕೆ ಕವರ್ ಮಾಡಿದ್ದ ಗಾಜಿನ ಪೆಟ್ಟಿಗೆ ತೆಗೆದು ಅಪ್ಪನನ್ನ ದ್ರಿತಿಗೆ ತೋರಿಸಲಾಯ್ತು. ಈ ವೇಳೆ ಅಪ್ಪನ ತಲೆಯನ್ನ ಮುಟ್ಟಿ ಕಣ್ಣೀರಿಟ್ಟರು ದ್ರಿತಿ. ಈ ವೇಳೆ ದೊಡ್ಡಪ್ಪ ಶಿವರಾಜ್ಕುಮಾರ್ ಮತ್ತಿತರರು ದ್ರಿತಿಯನ್ನ ಸಮಾಧಾನ ಪಡಿಸೋ ಪ್ರಯತ್ನ ಮಾಡಿದ್ರು. ಬಳಿಕ ಇಬ್ಬರು ಪುತ್ರಿಯರು ಕೂಡ ಅಮ್ಮನ ಎರಡೂ ಬದಿ ಕೂತು ಪಾರ್ಥಿ ಶರೀರ ನೋಡ್ತಾ ಕಣ್ಣೀರು ಹಾಕಿದ್ರು. ಇನ್ನು ಶಿವಣ್ಣ ಕೂಡ ಇವತ್ತು ಪಾರ್ಥಿವ ಶರೀರರದ ಮುಂದೆ ಕೂತು ಬಿಕ್ಕಿಬಿಕ್ಕಿ ಅತ್ತರು.
-masthmagaa.com
Contact Us for Advertisement