ಮಾನನಷ್ಟ ಕೇಸ್‌ ಸಂಬಂಧ ರಾಹುಲ್‌ಗೆ ಜಾಮೀನು ಮಂಜೂರು!

masthmagaa.com:

2018ರಲ್ಲಿ ಗೃಹ ಸಚಿವ ಅಮಿತ್‌ ಶಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಮಾನನಷ್ಟ ಕೇಸ್‌ನಲ್ಲಿ ಸಿಕ್ಹಾಕೊಂಡ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಇದೀಗ ಜಾಮೀನು ಸಿಕ್ಕಿದೆ. ಉತ್ತರ ಪ್ರದೇಶದ ಸುಲ್ತಾನ್‌ಪುರ್‌ ಜಿಲ್ಲಾ ಕೋರ್ಟ್‌ ಫೆಬ್ರುವರಿ 20 ರಂದು ರಾಹುಲ್‌ ಗಾಂಧಿ ಅವ್ರಿಗೆ ಜಾಮೀನು ಮಂಜೂರು ಮಾಡಿದೆ. ಹೀಗಂತ ರಾಹುಲ್‌ ಗಾಂಧಿಯವ್ರ ವಕೀಲರು ಈ ಮಾಹಿತಿ ನೀಡಿದ್ದಾರೆ. ಅಂದ್ಹಾಗೆ 2018ರಲ್ಲಿ ರಾಹುಲ್‌ ಗಾಂಧಿಯವ್ರು ಕಾರ್ಯಕ್ರಮವೊಂದ್ರಲ್ಲಿ ಅಮಿತ್‌ ಶಾ ಅವ್ರನ್ನ ಕೊಲೆಗಡುಕ ಅಂತ ಕರೆದಿದ್ರು. ಸೋ ಬಿಜೆಪಿ ನಾಯಕ ವಿಜ ಯ್‌ ಮಿಶ್ರಾ ಅಂದು ಈ ಕುರಿತು ರಾಹುಲ್‌ ವಿರುದ್ಧ ಮಾನನಷ್ಟ ಕೇಸ್‌ ದಾಖಲಿಸಿದ್ರು.

-masthmagaa.com

Contact Us for Advertisement

Leave a Reply