masthmagaa.com:
ರಾಜ್ಯದಲ್ಲಿ ಚುನಾವಣೆ ಹತ್ತಿರ ಆಗ್ತಿದ್ದಂತೆ ರಾಜ್ಯ ನಾಯಕರ ಮೇಲೆ ಒಂದೊಂದೇ ಭಯಾನಕ ಆರೋಪ ಭುಗಿಲೇಳ್ತಾ ಇವೆ. ನಿನ್ನೆ ತಾನೇ ರಮೇಶ್ ಜಾರಕಿಹೊಳಿ, ಡಿಕೆಶಿ ವಿರುದ್ಧ ಆಡಿಯೋ ರಿಲೀಸ್ ಮಾಡಿದ್ರು. ಇದೀಗ ಕಾಂಗ್ರೆಸ್ ವಕ್ತಾರ ಲಕ್ಷ್ಮಣ್, ರಮೇಶ್ ಜಾರಕಿಹೊಳಿ ವಿರುದ್ದ ಕೊಲೆ ಆರೋಪ ಮಾಡಿದ್ದಾರೆ. ಈ ಮಾಹಿತಿಗಳು ನೂರಕ್ಕೆ ನೂರರಷ್ಟು ಸತ್ಯ. ರಮೇಶ್ ಜಾರಕಿಹೊಳಿ ಕಳ್ಳಬಟ್ಟಿ ಮಾರ್ತಿದ್ದಾಗ ಅವರ ಸಂಗಡಿಗರ ಜೊತೆಗೆ ಸೇರಿ 1988ರಲ್ಲಿ ಅಬಕಾರಿ ಇನ್ಸಪೆಕ್ಟರ್ ಇಂಗಳೆಗೆಯವರನ್ನು ಗುಂಡಿಕ್ಕಿ ಕೊಲೆ ಮಾಡಿದ್ರು. ಜೊತೆಗೆ 1994ರಲ್ಲಿ ಗೋಕಾಕ್ ಸರ್ಕಾರಿ ಮಿಲ್ನಲ್ಲಿ ಹತ್ಯಾಕಾಂಡ ನಡೆದಿತ್ತು. ಆಗ ಸಹ ರಮೇಶ್ ಜಾರಕಿಹೊಳಿಯವರೇ ಈ ಹತ್ಯಾಕಾಂಡದ ನೇತೃತ್ವ ವಹಿಸಿದ್ದರು ಅಂತ ಹೇಳಿದಾರೆ.
-masthmagaa.com
Contact Us for Advertisement