ಗಾಂಧೀ ಕುಟುಂಬದ ಸಮ್ಮುಖದಲ್ಲಿ ರೇವಂತ್‌ ರೆಡ್ಡಿ ಪ್ರಮಾಣವಚನ!

masthmagaa.com:

ತೆಲಂಗಾಣ ರಾಜ್ಯದ ಎರಡನೇ ಮುಖ್ಯಮಂತ್ರಿಯಾಗಿ ಅನುಮುಲ ರೇವಂತ್ ರೆಡ್ಡಿ ಪ್ರಮಾಣವಚನ ಸ್ವೀಕರಿಸಿದ್ದಾರೆ.‌ ಹೈದ್ರಾಬಾದ್‌ನ ಲಾಲ್‌ ಬಹದ್ದೂರ್‌ ಶಾಸ್ತ್ರಿ ಕ್ರೀಡಾಂಗಣದಲ್ಲಿ ಗಾಂಧೀ ಕುಟುಂಬ, ಸಿಎಂ ಸಿದ್ಧರಾಮಯ್ಯ ಮುಂತಾದ ಕಾಂಗ್ರೆಸ್‌ ನಾಯಕರ ಉಪಸ್ಥಿತಿಯಲ್ಲಿ ಅಧಿಕಾರದ ʻಹಸ್ತʼ ಚಾಚಿದ್ದಾರೆ. ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರಾಜನ್‌ ರೇವಂತ್‌ ರೆಡ್ಡಿಗೆ ಪ್ರಮಾಣವಚನ ಬೋಧಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರೇವಂತ್‌ಗೆ ಶುಭಕೋರಿ Xನಲ್ಲಿ ಪೋಸ್ಟ್‌ ಹಾಕಿದ್ದಾರೆ. ʻಕಂಗ್ರಾಟ್ಸ್‌ ರೇವಂತ್‌ ರೆಡ್ಡಿ “ಗಾರು”, ತೆಲಂಗಾಣದ ಅಭಿವೃದ್ಧಿ ಹಾಗೂ ಜನತೆಯ ಕಲ್ಯಾಣಕ್ಕೆ ನಾವು ಸಪೋರ್ಟ್‌ ಮಾಡ್ತೀವಿʼ ಅಂದಿದ್ದಾರೆ.

-masthmagaa.com

Contact Us for Advertisement

Leave a Reply