RSS​ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿಯಾದ ಮುಲಾಯಂ ಸಿಂಗ್!

masthmagaa.com:

ಉತ್ತರ ಪ್ರದೇಶ ಚುನಾವಣೆ ನಡುವೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದ್ರಲ್ಲಿ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್ ಆರ್​​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗಾವತ್​​​ರನ್ನು ಭೇಟಿಯಾಗಿದ್ದಾರೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಮೊಮ್ಮಗಳ ಮದುವೆ ರಿಸೆಪ್ಶನ್​​ನಲ್ಲಿ ಈ ಭೇಟಿ ನಡೆದಿದೆ. 2 ದಿನಗಳ ಹಿಂದಷ್ಟೇ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಹಲವು ನಾಯಕರ ಮೇಲೆ ಐಟಿ ದಾಳಿ ನಡೆದಿತ್ತು. ಅದ್ರ ಬೆನ್ನಲ್ಲೇ ಈ ಭೇಟಿ ನಡೆದಿರೋದು ರಾಜಕೀಯ ಪಡಸಾಲೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಅಂತೂ ಸಪಾದಲ್ಲಿ ಸ ಅಂದ್ರೆ ಸಂಘವಾದನಾ ಅಂತ ಪ್ರಶ್ನಿಸಿದೆ.

-masthmagaa.com

 

Contact Us for Advertisement

Leave a Reply