masthmagaa.com:
ಇರಾನ್ ದಾಳಿ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ರಿಯಾಕ್ಟ್ ಮಾಡಿದ್ದಾರೆ. ಈ ಕೂಡಲೇ ಉದ್ವಿಗ್ನತೆ ಹೆಚ್ಚಾಗೋದನ್ನ ನಿಲ್ಲಿಸಿ ಅಂತ ಇರಾನ್ ಮತ್ತು ಇಸ್ರೇಲ್ಗೆ ಕರೆ ಕೊಟ್ಟಿದ್ದಾರೆ. ಅಷ್ಟೇ ಅಲ್ದೇ ʻಇದು ತೀವ್ರ ಕಳವಳಕಾರಿ ವಿಷಯವಾಗಿದೆ ಅಂತೇಳಿದ್ದಾರೆ. ʻಇರಾನ್ ಮತ್ತು ಇಸ್ರೇಲ್ ನಡುವಿನ ಈ ಸಂಘರ್ಷ ಎಲ್ಲರೂ ಆತಂಕ ಪಡುವಂತಹ ವಿಷಯವಾಗಿದೆ. ಆಕ್ಟೋಬರ್ 7ರಂದು ಇಸ್ರೇಲ್-ಹಮಾಸ್ ಯುದ್ಧ ಶುರುವಾದಾಗ ನಮಗೆ ಚಿಂತೆಯಾಗಿತ್ತು. ಆದ್ರೆ ಈಗ ಈ ಉದ್ವಿಗ್ನತೆ ಬೇರೆ ಬೇರೆ ರೀತಿಯ ಆಯಾಮಗಳನ್ನ ಪಡ್ಕೊಳ್ತಿದೆ. ಬೇರೆ ವಲಯಗಳಲ್ಲಿ ಉದ್ವಿಗ್ನತೆ ಹೆಚ್ಚಾಗ್ತಿದ್ದು, ಬಹಳ ಚಿಂತನಕಾರಿಯಾಗಿದೆ. ಇಸ್ರೇಲ್ ಪರಿಸ್ಥಿತಿಯನ್ನ ಭಾರತ ನಿರಂತರವಾಗಿ ಮಾನಿಟರ್ ಮಾಡ್ತಿದ್ದೇವೆ ಅಂದಿದ್ದಾರೆ.
-masthmagaa.com
Contact Us for Advertisement