masthmagaa.com:
ʻವೈ ಭಾರತ್ ಮ್ಯಾಟರ್ಸ್ʼ ಅನ್ನೋ ತಮ್ಮ ಪುಸ್ತಕ ಲಾಂಚ್ ಸಂದರ್ಭದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್, ನೆಹರು ಮೇಲೆ ಎರಗಿದ್ದಾರೆ. ʻಅಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯರಾಗೋಕೆ ಭಾರತಕ್ಕೆ ಮೊದಲು ಆಹ್ವಾನ ನೀಡಲಾಗಿತ್ತು. ಆವಾಗ ಇಂಡೋ-ಚೀನಾ ಯುದ್ಧ ನಡೀತಿದ್ರು, ನೆಹರು ಈ ಅವಕಾಶವನ್ನ ಚೀನಾಗೆ ಬಿಟ್ಟುಕೊಟ್ರುʼ ಅಂತ ಹೇಳಿದ್ದಾರೆ. ಜೊತೆಗೆ ನಾವು ಅಂದು ಈಗಿನ ರೀತಿ ಹೆಚ್ಚು ʻಭಾರತ್ʼ ಆಗಿದ್ರೆ, ಅಂದ್ರೆ ಈಗ ಭಾರತ ತನ್ನ ಒಳಿತಿಗಾಗಿ ಹೊಂದಿರೊ ವಿದೇಶಾಂಗ ನೀತಿ ಅಂದು ಹೊಂದಿದ್ರೆ, ಚೀನಾ ಜೊತೆಗಿನ ಸಂಬಂಧದ ಬಗ್ಗೆ ನಾವು ಇಷ್ಟು ಮೃದುವಾಗಿರೋ ಅವಶ್ಯಕತೆ ಇರ್ತಿರ್ಲಿಲ್ಲ ಅಂದಿದ್ದಾರೆ.
-masthmagaa.com
Contact Us for Advertisement