ಸಂದೇಶ್‌ಖಾಲಿ ಅಕ್ರಮ: ಶರಣಾಗತಿಗೆ ಹೈಕೋರ್ಟ್‌ ಆದೇಶ!

masthmagaa.com:

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಅಕ್ರಮ ಕುರಿತು ಇದೀಗ ಕೊಲ್ಕತ್ತಾ ಹೈಕೋರ್ಟ್‌ TMC ನಾಯಕ ಶೇಖ್‌ ಷಹಜಹಾನ್‌ಗೆ ಸರೆಂಡರ್‌ ಆಗುವಂತೆ ಸೂಚಿಸಿದೆ. ಜೊತೆಗೆ ʻಸಂದೇಶ್‌ಖಾಲಿಯ ಈ ಎಲ್ಲಾ ಸಮಸ್ಯೆಗಳಿಗೆ..ಅಂದ್ರೆ ಅಲ್ಲಿನ ಜನರಿಂದ ಲ್ಯಾಂಡ್‌ ಕಬಳಿಕೆ ಇರ್ಬೋದು ಅಥ್ವಾ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಇರ್ಬೋದು… ಇವೆಲ್ಲದಕ್ಕೂ ಶೇಖ್‌ ಷಹಜಹಾನ್‌ ಪ್ರಮುಖ ಕಾರಣ. ಆದ್ರಿಂದ ಸರ್ಕಾರ ಈತನಿಗೆ ಸಪೋರ್ಟ್‌ ನೀಡ್ಬಾರ್ದುʼ ಅಂತ ಪಶ್ಚಿಮ ಬಂಗಾಳದ ಸರ್ಕಾರವನ್ನ ಹೈಕೋರ್ಟ್‌ ತರಾಟೆಗೆ ತೆಗೆದ್ಕೊಂಡಿದೆ. ಅಂದ್ಹಾಗೆ ಬಿಜೆಪಿ ನಾಯಕ ಸುವೆಂದು ಅಧಿಕಾರಿ ಸಂದೇಶ್‌ಖಾಲಿ ಭೇಟಿಗೆ ಅನುಮತಿ ಪಡೆಯೋಕೆ ಕೊಲ್ಕತ್ತಾ ಹೈಕೋರ್ಟ್‌ಗೆ ಮನವಿ ಮಾಡಿದ್ರು. ಈ ಬಗ್ಗೆ ವಿಚಾರಣೆ ನಡೆಸೋವಾಗ ಕೋರ್ಟ್‌ ಈ ರೀತಿ ಹೇಳಿದೆ. ಇನ್ನು ಈ ವೇಳೆ ಮುಖ್ಯ ನ್ಯಾಯಮೂರ್ತಿ ಶಿವಜ್ಞಾನಂ ಮತ್ತು ನ್ಯಾಯಮೂರ್ತಿ ಹಿರಣ್ಮಯ್‌ ಭಟ್ಟಾಚಾರ್ಯ ನೇತೃತ್ವದ ವಿಭಾಗೀಯ ಪೀಠ ಸುವೆಂದು ಅಧಿಕಾರಿಗೆ ಅನುಮತಿ ಕೂಡ ನೀಡಿದೆ.

-masthmagaa.com

Contact Us for Advertisement

Leave a Reply