masthmagaa.com:
ಬಾಲಿವುಡ್ ನಟ ಶಾರುಖ್ ಖಾನ್ ಇವತ್ತು ಮುಂಬೈನ ಅರ್ಥರ್ ರೋಡ್ ಜೈಲಿಗೆ ಹೋಗಿ, ಜೈಲಿನಲ್ಲಿರೋ ತಮ್ಮ ಪುತ್ರ ಆರ್ಯನ್ ಖಾನ್ರನ್ನ ಭೇಟಿಯಾದ್ರು. ಕೆಲ ಕಾಲ ಆರ್ಯನ್ ಜೊತೆ ಮಾತನಾಡಿದ್ರು. ಈ ವೇಳೆ ಪುತ್ರ ಭಾವುಕನಾದ ಅಂತ ವರದಿಯಾಗಿದೆ. ಅಂದ್ಹಾಗೆ ಹೊಸ ಕೊರೋನಾ ಗೈಡ್ಲೈನ್ಸ್ ಪ್ರಕಾರ, ಇವತ್ತಿನಿಂದ ಅರ್ಥರ್ ರೋಡ್ ಜೈಲಿನಲ್ಲಿರೋ ಖೈದಿಗಳನ್ನ ಮತ್ತು ವಿಚಾರಣಾದೀನರನ್ನ ಭೇಟಿ ಮಾಡಲು ಅವರ ಸಂಬಂಧಿಕರು, ವಕೀಲರು ಅವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ ಶಾರುಖ್ ಖಾನ್ ಜೈಲಿಗೆ ಹೋಗಿ ಪುತ್ರನ ಜೊತೆ ಮಾತನಾಡಿದ್ದಾರೆ. ಇದಾಗಿ ಕೆಲವೇ ಕ್ಷಣಗಳಲ್ಲಿ ಮಾದಕವಸ್ತು ನಿಗ್ರಹ ದಳದ ಅಧಿಕಾರಿಗಳು ಮುಂಬೈನಲ್ಲಿರೋ ಶಾರುಖ್ ಖಾನ್ ಮನೆಗೆ ಹೋಗಿದ್ದಾರೆ. ಮನೆ ಹೆಸರು ಮನ್ನತ್ ಅಂತ. ಅಧಿಕಾರಿಗಳು ಅಲ್ಲಿಗೆ ಹೋಗಿದ್ದು ನೋಡಿ ಶಾರುಖ್ ಮನೆ ಮೇಲೂ ಎನ್ಸಿಬಿ ದಾಳಿ ಮಾಡಿದೆ ಅಂದುಕೊಳ್ಳಲಾಯ್ತು. ಬಳಿಕ ಎನ್ಸಿಬಿ ಅಧಿಕಾರಿಗಳು ಬಂದು, ಇದು ರೇಡ್ ಅಲ್ಲ, ಆರ್ಯನ್ ಖಾನ್ಗೆ ಸಂಬಂಧಿಸಿದ ಕೆಲವೊಂದು ದಾಖಲೆಗಳನ್ನ ಕಲೆಕ್ಟ್ ಮಾಡೋಕೆ ಬಂದಿದ್ದೀವಿ ಅಂತ ಸ್ಪಷ್ಟಪಡಿಸಿದ್ರು.
ಇನ್ನು ಕ್ರೂಸ್ಶಿಪ್ ಮಾದಕ ವಸ್ತು ಕೇಸ್ಗೆ ಸಂಬಂಧಿಸಿದಂತೆ ಆರ್ಯನ್ ಖಾನ್ನ ನ್ಯಾಯಾಂಗ ಬಂಧನವನ್ನ ವಿಶೇಷ ಎನ್ಡಿಪಿಎಸ್ ಕೋರ್ಟ್ ಅಕ್ಟೋಬರ್ 30ರವರೆಗೆ ವಿಸ್ತರಿಸಿದೆ. ಮತ್ತೊಂದುಕಡೆ ಜಾಮೀನು ಕೋರಿ ಆರ್ಯನ್ ಖಾನ್ ವಕೀಲರು ಬಾಂಬೆ ಹೈಕೋರ್ಟ್ಗೆ ಸಲ್ಲಿಸಿದ ಅರ್ಜಿಯನ್ನ ಕೋರ್ಟ್ ಅಕ್ಟೋಬರ್ 26ನೇ ತಾರೀಖು ನಡೆಸಲಿದೆ.
-masthmagaa.com
Contact Us for Advertisement