masthmagaa.com:
ಮುಂದಿನ ತಿಂಗಳು ವಿಂಡೀಸ್ ವಿರುದ್ಧ ಕೆರೆಬಿಯನ್ ನಾಡಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಒನ್-ಡೇ ಸರಣಿಗೆ ಬಿಸಿಸಿಐ ತಂಡ ಪ್ರಕಟ ಮಾಡಿದೆ. ರೋಹಿತ್, ಕೋಹ್ಲಿ ಸೇರಿದಂತೆ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಮತ್ತೊಬ್ಬ ಹಿರಿಯ ಅನುಭವಿ ಆಟಗಾರ ಶಿಖರ್ ಧವನ್ ತಂಡವನ್ನ ಮುನ್ನಡೆಸಲಿದ್ದಾರೆ. ಇನ್ನು ಆಲ್ರೌಂಡರ್ ಆಟಗಾರ ರವೀಂದ್ರ ಜಡೇಜಾ ಅವ್ರನ್ನ ತಂಡದ ಉಪನಾಯಕನನ್ನಾಗಿ ನೇಮಿಸಲಾಗಿದೆ. 16 ಜನರ ಈ ತಂಡದಿಂದ ರೋಹಿತ್, ಕೋಹ್ಲಿ ಅಷ್ಟೇ ಅಲ್ಲದೇ ಬೂಮ್ರಾ, ಪಂತ್, ಹಾರ್ದಿಕ್, ಶಮಿಗೂ ವಿಶ್ರಾಂತಿ ನೀಡಲಾಗಿದೆ. ಇನ್ನು ಗಾಯದ ಸಮಸ್ಯೆ ಇಂದ ಬಳಲ್ತಾ ಇರೋ ಕನ್ನಡಿಗ ಕೆ.ಎಲ್ ರಾಹುಲ್ ಕೂಡ ತಂಡದಲ್ಲಿ ಇಲ್ಲ. ಉಳಿದಂತೆ ಇತ್ತಿಚೆಗೆ ಐರ್ಲೆಂಡ್ ವಿರುದ್ಧ ಮತ್ತು ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20ಯಲ್ಲಿ ಆಡುವ ತಂಡವೇ ಇಲ್ಲೂ ಇದೆ. ಅಂದ್ಹಾಗೆ ಮುಂದಿನ ತಿಂಗಳು ಜುಲೈ 6 ರಿಂದ ಈ ಸರಣಿ ಪ್ರಾರಂಭವಾಗಲಿದೆ.
-masthmagaa.com
Contact Us for Advertisement