masthmagaa.com:
ಶಿವಮೊಗ್ಗ ರಾಗಿಗುಡ್ಡ ಗಲಭೆ ಕೇಸ್ಗೆ ಸಂಬಂಧಿಸಿದಂತೆ ಶಾಕಿಂಗ್ ವಿಚಾರವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ನಿಷೇಧಿತ PFI ಕಾರ್ಯಕರ್ತರ ಲಿಂಕ್ ಇರೋದು ಬಯಲಾಗಿದೆ. ಈ ಗಲಭೆ ಕೇಸ್ನಲ್ಲಿ ಅರಸ್ಟ್ ಆಗಿರುವ ಆರೋಪಿಗಳು ಪಿಎಫ್ಐ ಕಾರ್ಯಕರ್ತರ ಹೆಸರುಗಳನ್ನು ರಿವೀಲ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ 7 ಜನ ಪಿಎಫ್ಐ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಲಾಗಿದೆ. ಈ 7 ಜನ ಕಾರ್ಯಕರ್ತರು ಸ್ಥಳೀಯ ಯುವಕರನ್ನ ಗಲಭೆ ಸೃಷ್ಟಿಸುವಂತೆ ಪ್ರೇರೆಪಿಸಿದ್ರು ಅನ್ನೋ ಅಂಶ ಬೆಳಕಿಗೆ ಬಂದಿದೆ. ಇದೇ ಕಾರಣಕ್ಕೆ ಗಲಾಟೆ ಬೆನ್ನಲ್ಲೇ ಈ 7 ಜನ ಪಿಎಫ್ಐ ಕಾರ್ಯಕರ್ತರು ತಲೆಮರೆಸಿಕೊಂಡಿದ್ದು, ಸದ್ಯ ಕೆಲ ಆರೋಪಿಗಳನ್ನು ವಶಕ್ಕೆ ಪಡೆದಿರೋದಾಗಿ ಪೊಲೀಸರು ಹೇಳಿದ್ದಾರೆ. ಹಿದಾಯತ್, ಅನ್ವರ್, ಮುಬಾರಕ್ ಅನ್ನೋರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
-masthmagaa.com
Contact Us for Advertisement