masthmagaa.com:
ಈ ಬಾರಿಯ ಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರವಾಗಿ ಗುರುತಿಸಿಕೊಂಡಿರೋ ವರುಣ ಕ್ಷೇತ್ರದಲ್ಲಿ ನಟ ಶಿವರಾಜ್ ಕುಮಾರ್, ಸಿದ್ದರಾಮಯ್ಯ ಪರ ಪ್ರಚಾರ ಮಾಡಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸಂಸದ ಪ್ರತಾಪ್ ಸಿಂಹ ಮಾತನಾಡಿ ರಾಜಕುಮಾರ್ ಕುಟುಂಬವನ್ನ ರಾಜಕೀಯದ ಹೊರತಾಗಿ ನೋಡ್ತೀವಿ. ಸೋಮಣ್ಣ ಅವರು ಪುನೀತ್ ಹೆಸರಲ್ಲಿ ಆಸ್ಪತ್ರೆ ಕಟ್ಟಿಸಿದ್ದಾರೆ. ಆದ್ರೆ ಶಿವರಾಜ್ ಕುಮಾರ್ ಈ ರೀತಿ ಪ್ರಚಾರ ಮಾಡೋದು ಸರಿಯಲ್ಲ. ಹಿಂದೆ ಶಿವಮೊಗ್ಗದಲ್ಲಿ ಯಡಿಯೂರಪ್ಪ ವಿರುದ್ದ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ಮಾಡಿದ್ರು. ಆಗ ಕೂಡ ಶಿವರಾಜ್ ಕುಮಾರ್ ಯಡಿಯೂರಪ್ಪ ವಿರುದ್ದ ತಮ್ಮ ಪತ್ನಿ ಪರವಾಗಿ ಚಿತ್ರರಂಗವನ್ನ ಸೇರಿಸಿಕೊಂಡು ಪ್ರಚಾರ ಮಾಡಿದ್ರು. ನಾನೊಬ್ಬ ರಾಜ್ ಕುಟುಂಬದ ಅಭಿಮಾನಿಯಾಗಿ ಅವರನ್ನ ಯಾವುದೇ ಪಕ್ಷದ ಪರವಾಗಿ ಪ್ರಚಾರ ಮಾಡೋದನ್ನ ನೋಡೋಕೆ ಇಷ್ಟ ಪಡಲ್ಲ ಅಂತ ಹೇಳಿದಾರೆ. ಇತ್ತ ಸೋಮಣ್ಣ ಮಾತನಾಡಿ, ಶಿವರಾಜ್ಕುಮಾರ್ ಅವರಿಗೆ ನಾನು ಮನವಿ ಮಾಡ್ತೇನೆ. ನನಗೂ ರಾಜ್ ಕುಟುಂಬಕ್ಕೂ 40 ವರ್ಷಗಳ ಅವಿನಾಭಾವ ಸಂಬಂಧ ಇದೆ. ಶಿವಣ್ಣ ಯಾಕ್ ಈ ರೀತಿ ಮಾಡಿದ್ರೂ ಗೊತ್ತಿಲ್ಲ ಅಂತ ಹೇಳಿದ್ದಾರೆ. ಜೊತೆಗೆ ದುನಿಯಾ ವಿಜಯ್ ರಮ್ಯಾ ಎಲ್ರೂ ಸ್ಟಾರ್ ಪ್ರಚಾರಕರಾಗಿ ಬಂದಿದ್ದಾರೆ. ಒಬ್ಬ ಸೋಮಣ್ಣನ ವಿರುದ್ದ ಸಿದ್ದರಾಮಯ್ಯ ಸ್ಟಾರ್ಗಳನ್ನ ಕರೆಸಿ ಪ್ರಚಾರ ಮಾಡ್ತಿರೋದು ನನಗೆ ದೊಡ್ಡ ಆನಂದ ಕೊಟ್ಟಿದೆ ಅಂತ ಸೋಮಣ್ಣ ಹೇಳಿದ್ದಾರೆ. ಇನ್ನೊಂದ್ಕಡೆ ಮೊನ್ನೆ ಸುದೀಪ್ ಪ್ರಚಾರ ಮಾಡಿದ್ದ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಶಿವಣ್ಣ ಪ್ರಚಾರ ಮಾಡಲಿದ್ದಾರೆ. ಮೇ 6 ನೇ ತಾರೀಖು ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರವಾಗಿ ಶಿವಣ್ಣ ರ್ಯಾಲಿ ಮಾಡಲಿದ್ದಾರೆ ಅಂತ ಕೂಡ ಮಾಹಿತಿ ಬರ್ತಾಯಿದೆ.
-masthmagaa.com
Contact Us for Advertisement