‘ಸಿದ್ದುನ ಟಿಪ್ಪು ರೀತಿ ಹೊಡೆದು ಹಾಕಬೇಕು’! ಬಾಯಲ್ಲೇ ಬೆಂಕಿ ಹಚ್ಚಿದ ಅಶ್ವತ್ಥ್‌ ನಾರಾಯಣ!

masthmagaa.com:

ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವ್ರನ್ನ ಟಿಪ್ಪು ಸುಲ್ತಾನ್‌ನ್ನ ಹೊಡೆದು ಹಾಕಿದಂತೆ ಹೊಡೆದು ಹಾಕಬೇಕು ಅಂತ ಸಚಿವ ಅಶ್ವತ್ಥ್ ನಾರಾಯಣ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಕೋಲಾಹಲವನ್ನೇ ಉಂಟುಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರೊ ಸಿದ್ದು, ಹೊಡಿ ಬಡಿ ಅನ್ನೊದು ಬಿಜೆಪಿಯವ್ರ ಸಂಸ್ಕೃತಿ. ಟಿಪ್ಪು ಸುಲ್ತಾನ್ ರೀತಿ ನನ್ನನ್ನು ಮುಗಿಸಿ ಅಂದರೇ ಇದರರ್ಥ ಏನು? ಇದು ಸರೀನಾ, ತಪ್ಪಾ ಅಂತ ಪ್ರಧಾನಿ ಮೋದಿ, ಅಮಿತ್ ಶಾ ಹೇಳಲಿ. ಕೂಡಲೇ ಅಶ್ವತ್ಥ್​ ನಾರಾಯಣ ಅವ್ರನ್ನ ವಜಾಗೊಳಿಸಬೇಕು ಅಂತ ರಾಜ್ಯಪಾಲ ಥಾವರ್​ ಚಂದ್ ಗೆಹ್ಲೋಟ್​ಗೆ ಮನವಿ ಮಾಡ್ತೀನಿ ಅಂತ ಹೇಳಿದ್ದಾರೆ. ಇತ್ತ ವಿಪಕ್ಷ ನಾಯಕ ಸಿದ್ದರಾಮಯ್ಯನವರ ತಲೆ ತೆಗೆಯಲು ಅವರೇನು ಟಗರಾ? ಅಂತ ಡಿಕೆಶಿ ಪ್ರಶ್ನಿಸಿದ್ದಾರೆ. ಇನ್ನು ಹೇಳಿಕೆಗೆ ಆಕ್ರೋಶಗೊಂಡ ಕಾಂಗ್ರೆಸ್ಸಿಗರು ಹಾಗೂ ಸಿದ್ದು ಬೆಂಬಲಿಗರು ಕೂಡಲೇ ಅಶ್ವತ್ಥ್​ ನಾರಾಯಣರನ್ನು ವಜಾಗೊಳಿಸಬೇಕು ಅಂತ ಆಗ್ರಹಿಸಿದ್ದಾರೆ. ಅಲ್ದೇ ಅಶ್ವತ್ಥ್ ನಾರಾಯಣ ವಿರುದ್ದ ಕೊಲೆ ಯತ್ನ ಆರೋಪದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಠಾಣೆಯಲ್ಲಿ ಕಾಂಗ್ರೆಸ್‌ ಮುಖಂಡರು ಕೇಸ್‌ ದಾಖಲಿಸಿದ್ದಾರೆ. ಅಶ್ವತ್ಥ್‌ ಅಗ್ನಿಜ್ವಾಲೆ ಸದನದಲ್ಲೂ ಕಿಡಿ ಹೊತ್ತಿಸಿದ್ದು, ಕಾಂಗ್ರೆಸ್‌ ನಾಯಕರು ವಿಧಾನಸಭೆ ಬಾವಿಗಿಳಿದು ಪ್ರತಿಭಟನೆ ಮಾಡಿದ್ದಾರೆ. ಇತ್ತ ಘಟನೆಯನ್ನ AIMIMನ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ತೀವ್ರವಾಗಿ ಖಂಡಿಸಿದ್ದಾರೆ. ನಾನು ಟಿಪ್ಪು ಸುಲ್ತಾನ್‌ನ ಹೆಸರನ್ನ ಹೇಳ್ತೀನಿ. ನೀವ್‌ ಏನ್‌ ಮಾಡ್ತಿರಿ ನೋಡೋಣ ಅಂತ ಸವಾಲಾಕಿದ್ದಾರೆ. ಕರ್ನಾಟಕದ ಸಚಿವರು ಮುಕ್ತವಾಗಿ ಹಿಂಸಾಚಾರಕ್ಕೆ, ಕೊಲೆಗೆ ಹಾಗೂ ನರಮೇಧಕ್ಕೆ ಕರೆ ನೀಡಿದ್ದಾರೆ. ಇದಕ್ಕೆ ಪ್ರಧಾನಿ ಅವ್ರು ಒಪ್ತಾರಾ? ಕರ್ನಾಟಕದಲ್ಲಿರೊ ಬಿಜೆಪಿ ಸರ್ಕಾರ ಇದರ ವಿರುದ್ದ ಯಾವುದೇ ಕ್ರಮ ಕೈಗೊಳ್ಳಲ್ವಾ ಅಂತ ಪ್ರಶ್ನಿಸಿದ್ದಾರೆ. ಇತ್ತ ಅಶ್ವತ್ಥ್ ನಾರಾಯಣ ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕು. ಸಿದ್ದರಾಮಯ್ಯ ಅವ್ರಿಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡಲಾಗುತ್ತೆ ಜಮೀರ್ ಅಹ್ಮದ್​ಖಾನ್​ ಎಚ್ಚರಿಕೆ ನೀಡಿದ್ದಾರೆ. ಇದರ ಮಧ್ಯೆ ಮಂಡ್ಯದಲ್ಲಿ ನಡೆದ ಕಾರ್ಯಕ್ರಮ ಒಂದ್ರಲ್ಲಿ ನೀಡಿದ ಹೇಳಿಕೆಯನ್ನ ಅಶ್ವತ್ಥ್ ನಾರಾಯಣ ಅವ್ರು ಸಮರ್ಥಿಸಿಕೊಂಡಿದ್ದಾರೆ. ಚುನಾವಣೆಯನ್ನ ದೃಷ್ಟಿಯಲ್ಲಿಟ್ಟುಕೊಂಡು ನಾನು ಇಂಥ ಹೇಳಿಕೆ ನೀಡಿದ್ದೇನೆ. ಸಿದ್ದರಾಮಯ್ಯ ಅವ್ರನ್ನ ಟಿಪ್ಪುಗೆ ಹೋಲಿಸಿ ಮಾತಾಡಿದ್ದೇನೆ. ಟಿಪ್ಪು ಬಗ್ಗೆ ಸಿದ್ದರಾಮಯ್ಯನವರಿಗೆ ಇರುವ ಪ್ರೀತಿ ಬಗ್ಗೆ ಕೂಡ ಮಾತಾಡಿದ್ದೇನೆ. ಅವ್ರಿಗೆ ನಾನು ಅಗೌರವವಾಗಿ ಮಾತಾಡಿಲ್ಲ. ರಾಜಕೀಯವಾಗಿ ಕಾಂಗ್ರೆಸ್‌ ಪಕ್ಷವನ್ನ ಸೋಲಿಸಬೇಕು ಅಂತ ಹೇಳಿದ್ದೇನೆ. ನನ್ನ ಮಾತಿನಿಂದ ಅವ್ರಿಗೆ ನೋವಾಗಿದ್ರೆ ವಿಷಾದ ವ್ಯಕ್ತಪಡಿಸುತ್ತೇನೆ ಅಂತ ಹೇಳಿದ್ದಾರೆ. ಅಂದ್ಹಾಗೆ ಮಂಡ್ಯದಲ್ಲಿ ಮಾತಾಡಿದ್ದ ಅಶ್ವತ್ಥ್‌, ಟಿಪ್ಪು ಅಂತ ತಕ್ಷಣ ಸಿದ್ದರಾಮಯ್ಯ ಎದ್ದು ಬರ್ತಾರೆ. ಉರಿ ಗೌಡ, ನಂಜೇ ಗೌಡ ಟಿಪ್ಪುವನ್ನ ಏನು ಮಾಡಿದ್ರು ಅಂತ ಪ್ರಶ್ನಿಸಿದಾಗ, ಮೇಲಕ್ಕೆ ಕಳುಹಿಸಿದ್ರು, ಹೊಡೆದು ಹಾಕಿದ್ರು ಅಂತ ಕಾರ್ಯಕರ್ತರು ಉತ್ತರಿಸಿದ್ದಾರೆ. ಆಗ ಅದೇ ರೀತಿ ಇವರನ್ನೂ ಕಳುಹಿಸಬೇಕು, ಹೊಡೆದು ಹಾಕಬೇಕು ಅಂತ ಸಚಿವರು ಹೇಳಿದ್ರು.

-masthmagaa.com

Contact Us for Advertisement

Leave a Reply