ಸಿಧು ಮೋಸೆವಾಲಾ ಹತ್ಯೆಗೆ UPಯಲ್ಲಿ ಸಂಚು ರೂಪಿಸಲಾಗಿತ್ತು: ಮೂಲಗಳು

masthmagaa.com:

ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯ ಸಂಚು ಉತ್ತರ ಪ್ರದೇಶದಲ್ಲಿ ನಡೆದಿತ್ತು ಅಂತ ಮೂಲಗಳು ತಿಳಿಸಿವೆ. ಈ ದಾಳಿಯಲ್ಲಿ ಭಾಗಿಯಾಗಿದ್ದ ಬಿಷ್ಣೋಯ್‌ ಗ್ಯಾಂಗ್‌ನ ಅನೇಕ ಸದಸ್ಯರು ಅಯೋಧ್ಯೆ ಹಾಗೂ ಲಕ್ನೋ ಸುತ್ತಮುತ್ತ ಓಡಾಡ್ತಾ ಇದ್ದಿದ್ದು ತನಿಖೆಯ ವೇಳೆ ದೊರಕಿರೊ ಫೋಟೋಗಳಿಂದ ಬಹಿರಂಗವಾಗಿದೆ. ಬಿಷ್ಣೋಯಿ ಗ್ಯಾಂಗ್‌ಗೆ ಮೊದಲು ಉತ್ತರ ಪ್ರದೇಶದಲ್ಲಿ ದೊಡ್ಡ ಹಗರಣವೊಂದರಲ್ಲಿ ಭಾಗಿಯಾಗಿದ್ದ ವೈಟ್ ಕಾಲರ್ ವ್ಯಕ್ತಿಯೊಬ್ಬನನ್ನ ಹತ್ಯೆ ಮಾಡುವ ಡೀಲ್ ವಹಿಸಲಾಗಿತ್ತು. ಆದರೆ ಗ್ಯಾಂಗ್‌ನ ಯೋಜನೆ ವಿಫಲವಾಗಿತ್ತು. ಹೀಗಾಗಿ ಪಂಜಾಬ್‌ನ ಜನಪ್ರಿಯ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಪಿತೂರಿ ನಡೆಸಲಾಗಿತ್ತು ಅಂತ ಮೂಲಗಳು ತಿಳಿಸಿವೆ.

-masthmagaa.com

Contact Us for Advertisement

Leave a Reply