ಭಾರತ ಮೂಲದ ವ್ಯಕ್ತಿಗೆ ಸಿಂಗಪೂರ್‌ನಲ್ಲಿ ಗಲ್ಲು! ವ್ಯರ್ಥವಾಯಿತು ತಾಯಿ ಪ್ರಯತ್ನ

masthmagaa.com:

ಮಾದಕ ವಸ್ತುಗಳ ಸಾಗಾಟ ಸಂಬಂಧ ಭಾರತೀಯ ಮೂಲದ ಮಲೇಷಿಯನ್‌ ವ್ಯಕ್ತಿ 34 ವರ್ಷದ ನಾಗೇಂದ್ರನ್‌ ಧರ್ಮಲಿಂಗಂಗೆ ಸಿಂಗಪೂರ್‌ ಕೋರ್ಟ್‌ ಮರಣದಂಡನೆ ವಿಧಿಸಿದೆ. ಈ ಮೂಲಕ 12 ವರ್ಷಗಳಿಂದ ಮಗನನ್ನ ಉಳಿಸೋಕೆ ತಾಯಿ ಮಾಡ್ತಿದ್ದ ಪ್ರಯತ್ನವೆಲ್ಲಾ ವ್ಯರ್ಥವಾಗಿದೆ. 2009ರಲ್ಲಿ ಸಿಂಗಪೂರ್‌ ಗಡಿ ಸಮೀಪ ಸುಮಾರು 42.72 ಗ್ರಾಂ ಹೆರಾಯಿನ್‌ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಈತನಿಗೆ 2010ರಲ್ಲೇ ಡೆತ್‌ ಸೆಂಟೆನ್ಸ್‌ ಜಾರಿ ಮಾಡಲಾಗಿತ್ತು. ಆದ್ರೆ ಇದನ್ನ ಪುನರ್‌ ಪರಿಶೀಲಿಸುವಂತೆ ಕೋರಿ ಆರೋಪಿ ತಾಯಿ ಸಿಂಗಪೂರ್‌ ಕೋರ್ಟ್‌ಗೆ ಸುಮಾರು ಏಳು ಬಾರಿ ಅರ್ಜಿ ಸಲ್ಲಿಸಿದ್ರು. ಈ ಸಂಬಂಧ ವಿಚಾರಣೆ ನಡೆಸಿರೋ ಕೋರ್ಟ್‌ ಎಲ್ಲಾ ಅರ್ಜಿಯನ್ನ ರಿಜೆಕ್ಟ್‌ ಮಾಡಿದ್ದು ಆರೋಪಿ ಧರ್ಮಲಿಂಗಂನನ್ನ ಇಂದು ಬೆಳಿಗ್ಗೆ ಗಲ್ಲಿಗೇರಿಸಿದೆ.

-masthmagaa.com

Contact Us for Advertisement

Leave a Reply