ಜೈಲಿನಲ್ಲಿ ಮನೀಶ್‌ ಸಿಸೋಡಿಯಾ ಅವ್ರ ಹತ್ಯೆಗೆ ಸಂಚು ರೂಪಿಸಲಾಗಿದೆ: ಆಪ್

masthmagaa.com:

ದಿಲ್ಲಿ ಲಿಕ್ಕರ್‌ ಹಗರಣದಲ್ಲಿ ಜೈಲು ಪಾಲಾಗಿರೊ ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾ ಅವ್ರನ್ನ ತಿಹಾರ್‌ ಜೈಲಿನ ಸೆಲ್‌ ನಂಬರ್‌ 1ರಲ್ಲಿ ಇರಿಸಲಾಗಿದೆ. ಅದರ ಪಕ್ಕದ ವಾರ್ಡ್‌ ನಂಬರ್‌ 9ರಲ್ಲಿ ಘೋರ ಕೊಲೆ ಅಪರಾಧಿಗಳಿದ್ದಾರೆ. ಹೀಗಾಗಿ ಸಿಸೋಡಿಯಾ ಅವ್ರ ಹತ್ಯೆಗೆ ಸಂಚು ರೂಪಿಸಲಾಗ್ತಿದೆ ಅಂತ ಆಪ್‌ ನಾಯಕ ಸೌರಭ್‌ ಭಾರದ್ವಾಜ್‌ ಆರೋಪಿಸಿದ್ದಾರೆ. ಇತ್ತ ಸಿಸೋಡಿಯಾ ಅವ್ರನ್ನ ವಿಪಾಸನಾ ಸೆಲ್‌ನಲ್ಲಿ ಇರಿಸಬೇಕಂಬ ಕೋರ್ಟ್‌ನ ಆದೇಶವನ್ನ ಯಾಕೆ ಪಾಲಿಸ್ತಿಲ್ಲ. ಮೊದಲ ಬಾರಿಗೆ ಬಂದ ಯಾವುದೇ ಖೈದಿಯನ್ನ ಜೈಲಿನ ಸೆಲ್‌ ನಂಬರ್‌ 1 ರಲ್ಲಿ ಇರಿಸಲಾಗಲ್ಲ ಅಂತ ಆಪ್‌ ನಾಯಕ ಸಂಜಯ್‌ ಸಿಂಗ್‌ ಹೇಳಿದ್ದಾರೆ. ಆದ್ರೆ ಈ ಆರೋಪಗಳನ್ನ ಜೈಲು ಆಡಳಿತ ಅಲ್ಲಗಳೆದಿದೆ.

-masthmagaa.com

Contact Us for Advertisement

Leave a Reply