ತಾಲಿಬಾನ್‌ ಮನಸ್ಥಿತಿಗೆ ಹನುಮಾನ್‌ ಗದೆಯೇ ಪರಿಹಾರ: ಯೋಗಿ ಆದಿತ್ಯನಾಥ್‌

masthmagaa.com:

ಹಮಾಸ್‌ ಉಗ್ರರ ತಾಲಿಬಾನ್‌ನಂತ ಮನಸ್ಥಿತಿಯನ್ನ ಗಾಜಾ಼ದಲ್ಲಿ ಹೇಗೆ ನೆಲಕಚ್ಚಿಸಲಾಗ್ತಿದೆ ಅನ್ನೋದದನ್ನ ನೀವು ನೋಡ್ತಿಲ್ವ? ಹನುಮಂತನ ಗದೆಯ ಉತ್ತರವೆ ಅದಕ್ಕೆ ಪರಿಹಾರ. ದಂಡಂ ದಶಗುಣಂ” ಅಂತ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಗುಡುಗಿದ್ದಾರೆ. ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿ ಒಂದ್ರಲ್ಲಿ ಮಾತಾಡಿರೋ ಯೋಗಿ, “ದೇಶದ ಎಲ್ಲಾ ಸಮಸ್ಯೆಗಳಿಗೆ ಇನ್ನೊಂದು ಹೆಸರೇ ಕಾಂಗ್ರೆಸ್.‌ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಈ ಸಮಸ್ಯೆಗಳನ್ನ ಒಂದೊಂದಾಗಿ ಸಾಲ್ವ್‌ ಮಾಡಲಾಗ್ತಿದೆ. ಸರ್ದಾರ್‌ ಪಟೇಲರು ಕಾಶ್ಮೀರವನ್ನ ಭಾರತಕ್ಕೆ ಸೇರಿಸಿದ್ರು, ಆದ್ರೆ ನೆಹರು ಅಲ್ಲಿ ಸಮಸ್ಯೆಗಳನ್ನ ಹುಟ್ಟಾಕಿದ್ರು. ಅದ್ರಿಂದ್ಲೇ ಅಲ್ಲಿ ಭಯೋತ್ಪಾದನೆ ಹೆಚ್ಚಾಯ್ತು. ಮೋದಿ-ಅಮಿತ್‌ ಶಾ ಕಾಶ್ಮೀರವನ್ನು ಪ್ರಾಬ್ಲಮ್‌ ಫ್ರೀ ಮಾಡುದ್ರು. ಕಾಂಗ್ರೆಸ್‌ ಯಾವತ್ತು ರಾಮಲಲ್ಲ ದೇವಸ್ಥಾನದ ಸಮಸ್ಯೆ ಬಗೆಹರಿಸೊ ಪ್ರಯತ್ನ ಮಾಡಿಲ್ಲ. ಅದು ನಮ್ಮ ಕಾಲದಲ್ಲೆ ಆಯ್ತು. ಕಾಂಗ್ರೆಸ್‌ ಗೆದ್ದರೆ ನಮ್ಮ ಅಕ್ಕ-ತಂಗಿಯರು, ಹೆಣ್ಣು ಮಕ್ಕಳು ತಾಲಿಬಾನ್‌ ಮನಸ್ಥಿತಿಯನ್ನ ಫೇಸ್‌ ಮಾಡ್ಬೇಕಾಗತ್ತೆ” ಅಂದಿದ್ದಾರೆ.

-masthmagaa.com

Contact Us for Advertisement

Leave a Reply