masthmagaa.com:
ನ್ಯಾಯಾಂಗ ಬಂಧನದಲ್ಲಿರೋ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ರ ಹತ್ಯೆ ಮಾಡೋಕೆ ಸಂಚು ಮಾಡಲಾಗ್ತಿದೆ ಅಂತ ಆಪ್ ಪಕ್ಷ ಮೇಲಿಂದ್ಮೇಲಿಗೆ ಆರೋಪ ಮಾಡ್ತಲೇ ಇದೆ. ಇದೀಗ ಕೇಜ್ರಿವಾಲ್ರ ಪತ್ನಿ ಸುನಿತಾ ಕೇಜ್ರಿವಾಲ್ ಕೂಡ ಅದೇ ಆರೋಪವನ್ನ ರಿಪೀಟ್ ಮಾಡಿದ್ದಾರೆ. ʻಕೇಜ್ರಿವಾಲ್ರ ಸಣ್ಣಪುಟ್ಟ ವಿಚಾರಗಳ ಮೇಲೆ ನಿಗಾ ವಹಿಸಲಾಗ್ತಿದೆ. ಕ್ಯಾಮೆರಾ ಇನ್ಸ್ಟಾಲ್ ಮಾಡಿ ಅವ್ರು ತಿನ್ನೋ ಒಂದೊಂದು ತುತ್ತನ್ನ ಮಾನಿಟರ್ ಮಾಡಲಾಗ್ತಿದೆ. ಇದು ನಾಚಿಕೆಗೇಡಿನ ಸಂಗತಿ. ಇನ್ನು ಅವ್ರಿಗೆ ಇನ್ಸುಲಿನ್ ಪಡೆಯೋಕೂ ನಿರಾಕರಿಸಲಾಗಿದೆ. ಅವ್ರನ್ನ ಹತ್ಯೆ ಮಾಡೋಕೆ ಟ್ರೈ ಮಾಡ್ತಿದ್ದಾರೆʼ ಅಂದಿದ್ದಾರೆ.
ಇನ್ನೊಂದ್ಕಡೆ ಝಾರ್ಖಂಡ್ನ ರಾಂಚಿಯಲ್ಲಿ INDIA ಕೂಟ ಆಯೋಜಿಸಿರೋ ಮೆಗಾ ರ್ಯಾಲಿ ವೇಳೆ ಎರಡು ಖಾಲಿ ಖುರ್ಚಿಯನ್ನ ಇರಿಸಲಾಗಿದೆ. ಇವುಗಳನ್ನ ಬಂಧನದಲ್ಲಿರೋ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಝಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವ್ರಿಗೆ ಮೀಸಲಿಡಲಾಗಿದೆ ಎನ್ನಲಾಗಿದೆ.
-masthmagaa.com
Contact Us for Advertisement