ಅಪ್ಪು ಮನೆಗೆ ಭೇಟಿ ನೀಡಲಿರುವ ರಜನಿಕಾಂತ್!

masthmagaa.com:

ಅಕ್ಟೋಬರ್ 29 ರಂದು ಹೃದಯ ಸ್ಥಂಬನದಿಂದ ಪುನೀತ್ ರಾಜ್ ಕುಮಾರ್ ಹಠಾತ್ ಅಸುನೀಗಿದರು. ಪುನೀತ್ ಸಾವನ್ನಪ್ಪಿದ ದಿನದಂದೇ ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯ ಸರಿ ಇಲ್ಲದೇ ಅಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯದಲ್ಲಿ ಏರುಪೇರು ಆಗದೇ ಇದ್ದಿದ್ದರೆ ರಜನಿಕಾಂತ್ ಪುನೀತ್ ಅವರ ಪಾರ್ಥೀವ ಶರೀರವನ್ನು ನೋಡೋಕೆ ಬರುತ್ತಿದ್ದರು ಎಂದು ರಜನಿ ಸ್ನೇಹಿತ ರಾವ್ ಬಹದ್ದೂರ್ ಹೇಳಿದ್ದಾರೆ. ಅಪ್ಪು ಸಾವಿನ ಸುದ್ದಿ ತಿಳಿದ ರಜನಿ ಬಹಳ ನೊಂದುಕೊಂಡರು. ರಜನಿ ಅಷ್ಟು ನೊಂದುಕೊಂಡಿದ್ದನ್ನು ನಾನು ನೋಡಿದ್ದು ಬಹಳ ಕಡಿಮೆ ಅಂತ ಕೂಡ ಹೇಳಿದ್ದಾರೆ.
ಸದ್ಯಕ್ಕೆ ರಜನಿ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ಅಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಅಪ್ಪು ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ ಅಂತ ಹೇಳಿದ್ದಾರೆ. ಅಂದಹಾಗೆ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಸಿವ ನಿರ್ದೇಶನದ ಅನ್ನಾತೆ ಸಿನಿಮಾ ಇಂದು ದೇಶಾದ್ಯಂತ ಬಿಡುಗಡೆಯಾಗಿದೆ.
-masthmagaa.com
Contact Us for Advertisement

Leave a Reply