masthmagaa.com:
ಜಮ್ಮುವಿನಲ್ಲಿ ಪೋಲಿಸರು ಹಾಗೂ ಸೈನಿಕರ ಮೇಲೆ ಕಲ್ಲು ತೂರಾಟ ನಡೆಸಿ ಹಿಂಸಾಚಾರಕ್ಕೆ ಕಾರಣನಾಗಿದ್ದ ಎನ್ನಲಾದ ಶಂಕಿತ ಉಗ್ರನೋರ್ವನನ್ನ ಜಮ್ಮು-ಕಾಶ್ಮೀರ ಪೋಲಿಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ 38 ವರ್ಷದ ಶಂಕಿತ ಉಗ್ರ ತಾಲಿಬ್ ಹುಸೇನ್ ಬೆಂಗಳೂರಿನಲ್ಲಿ ತಾರಿಕ್ ಅಂತ ಹೆಸರು ಬದಲಿಸಿಕೊಂಡು ಓಡಾಡುತ್ತಿದ್ದ. ಬಿ.ಎನ್.ಎಲ್ ಏರ್ ಸರ್ವೀಸ್ ಎಂಬ ಸಂಸ್ಥೆಯಲ್ಲಿ ಕೆಲ್ಸ ಮಾಡ್ತಿದ್ದ ಅಂತ ಗೊತ್ತಾಗಿದೆ. ಜಮ್ಮುವಿನ ಕಿಸ್ತವಾರ್ ಠಾಣೆ ವ್ಯಾಪ್ತಿಯಲ್ಲಿ ಎರಡು ವರ್ಷಗಳ ಹಿಂದೆ ಹಿಂಸಾಚಾರ ನಡೆದಿತ್ತು. ಪ್ರಕರಣ ದಾಖಲಾಗ್ತಾ ಇದ್ದಂಗೆ ಜಮ್ಮುವಿನಿಂದ ಪರಾರಿಯಾಗಿ ಬೆಂಗಳೂರಿಗೆ ಬಂದಿದ್ದ ಎನ್ನಲಾಗಿದೆ. ಹಿಜ್ಬುಲ್ ಉಗ್ರ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ ಈತ ಬೆಂಗಳೂರಿಗೆ ಬರುವಾಗ ತಾಲಿಬ್ ಹುಸೇನ್ ತನ್ನ ಪೋಲಿಸ್ ಪತ್ನಿಯನ್ನು ಕೂಡ ಕರೆದುಕೊಂಡು ಬಂದಿದ್ದ ಜೊತೆಗೆ ಮೂವರು ಮಕ್ಕಳು ಕೂಡ ವಾಸವಿದ್ರು ಎನ್ನಲಾಗಿದೆ. ಓಕಳಿಪುರಂ ಮಸೀದಿ ಮುಖ್ಯಸ್ಥ ಅನ್ವರ್ ಪಾಷಾ ಉಗ್ರ ತಾಲಿಬ್ ಹುಸೇನ್ಗೆ ಆಶ್ರಯ ನೀಡಿದ್ದ. ಅಷ್ಟೇ ಅಲ್ಲದೇ ಅಲ್ಲಿನ ಮಸೀದಿಯಲ್ಲಿ ಪಾಠ ಪ್ರವಚನ ಮಾಡೋಕು ಆಸ್ಪದ ಕೊಟ್ಟಿದ್ದ ಎನ್ನಲಾಗಿದೆ. ಸದ್ಯ ತಾಲಿಬ್ನನ್ನ ಬಂಧಿಸಿರುವ ಪೋಲಿಸರು ಆತನನ್ನ ಕಾಶ್ಮೀರಕ್ಕೆ ಕರೆದುಕೊಂಡು ಹೋಗಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಸಿಎಂ ಬಸವರಾಜ್ ಬೊಮ್ಮಾಯಿ, ಇಂತಹ ಶಂಕಿತರ ಮೇಲೆ ಪೋಲಿಸ್ ಇಲಾಖೆ ನಿರಂತರ ಕಣ್ಣಿಟ್ಟಿರುತ್ತೆ. ಜಮ್ಮು-ಕಾಶ್ಮೀರ ಪೋಲಿಸರಿಗೆ ಸಹಕಾರ ಕೊಡ್ತೀವಿ ಅಂತ ಹೇಳಿದ್ದಾರೆ.
-masthmagaa.com
Contact Us for Advertisement