ಅಪ್ಪು ಸಮಾಧಿ ಬಳಿ ಬಿಕ್ಕಿ ಬಿಕ್ಕಿ ಅತ್ತ ತಮಿಳು ನಟ ಸೂರ್ಯ!

masthmagaa. com:
ತಮಿಳು ನಟ ಸೂರ್ಯ ಇಂದು ಪವರ್​ಸ್ಟಾರ್ ಪುನೀತ್​​ ರಾಜ್​​ಕುಮಾರ್​​ ಸಮಾಧಿಗೆ ಭೇಟಿ ನೀಡಿದ್ದರು. ಅಪ್ಪು ಸಮಾಧಿಗೆ ನಮನ ಸಲ್ಲಿಸಿದ ಅವರು ನೆಚ್ಚಿನ ನಟನನ್ನ ನೆನೆದು ಕಣ್ಣೀರು ಹಾಕಿದರು. ಸೂರ್ಯ ಅವರೊಂದಿಗೆ ಶಿವಣ್ಣ ಕೂಡ ಸಮಾಧಿ ಸ್ಥಳದಲ್ಲಿ ಹಾಜರಿದ್ದರು.

ಬಳಿಕ ಮಾತನಾಡಿದ ಸೂರ್ಯ ಅಪ್ಪು ಅಗಲಿಕೆ ಸಹಿಸಲಾಗದು. ಅಣ್ಣಾವ್ರು ನನಗೆ ಮಾದರಿಯಾಗಿದ್ದರು. ಎಲ್ಲ ಫೋಟೋಗಳಲ್ಲೂ ಪುನೀತ್ ನಗ್ತಿದ್ರು. ಕನ್ನಡಿಗರಿಗೆ ನಾನು ಏನು ಹೇಳಬೇಕೋ ತೋಚುತ್ತಿಲ್ಲ.​ ದೇವರು ಪುನೀತ್ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಹೇಳಿದರು.
-masthmagaa.com
Contact Us for Advertisement

Leave a Reply