ರಾಜ್ಯಪಾಲರ ಔತಣಕೂಟ ಬಹಿಷ್ಕರಿಸಿದ ತಮಿಳುನಾಡು ಸರ್ಕಾರ.. ಕಾರಣ ಏನು ಗೊತ್ತಾ?

masthmagaa.com:

ಮೆಡಿಕಲ್‌ ವಿದ್ಯಾರ್ಥಿಗಳಿಗೆ ನೀಟ್‌ (ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ) ಪರೀಕ್ಷೆಗಳನ್ನ ರದ್ದುಗೊಳಿಸೋ ವಿಚಾರವಾಗಿ ತಮಿಳುನಾಡು ಸಿಎಂ ಹಾಗು ಅಲ್ಲಿನ ರಾಜ್ಯಪಾಲರ ನಡುವಿನ ಮುಸುಕಿನ ಗುದ್ದಾಟ ಮತ್ತೆ ಬಹಿರಂಗವಾಗಿದೆ. ರಾಜ್ಯಪಾಲ ಆರ್‌ಎನ್‌ ರವಿ ಅವರು ಆಯೋಜಿಸಿದ್ದ ಔತಣಕೂಟವನ್ನ ಸ್ಟಾಲಿನ್‌ ನೇತೃತ್ವದ ರಾಜ್ಯ ಸರ್ಕಾರ ಅಧಿಕೃತವಾಗಿ ಬಾಯ್ಕಟ್‌ ಮಾಡಿದ್ದು ರಾಜ್ಯಪಾಲರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದೆ. ಅಂದ್ಹಾಗೆ ತಮಿಳುನಾಡಿನಲ್ಲಿ ನೀಟ್‌ ಪರೀಕ್ಷೆಯನ್ನ ನಿಷೇಧಿಸೋ ಬಗ್ಗೆ ಮಸೂದೆಯೊಂದನ್ನ ಕೂಡ ಅಂಗೀಕಾರ ಮಾಡಲಾಗಿದ್ದು ಕೇಂದ್ರಕ್ಕೆ ಕಳುಹಿಸಿಕೊಡುವಂತೆ ರಾಜ್ಯಪಾಲರ ಮೇಲೆ ಒತ್ತಡ ಹೇರಲಾಗ್ತಿದೆ. ಆದ್ರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರೋ ಅಲ್ಲಿನ ಗವರ್ನರ್‌, ಅದರಿಂದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತೆ ಅಂತ ಹೇಳಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply