masthmagaa.com:
ತೆಲಂಗಾಣದಲ್ಲಿ ನವೆಂಬರ್ 30 ರಂದು ನಡಯಲಿರೋ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾರಿ ನಡಸಿದೆ. ಕರ್ನಾಟಕ ಮಾದರಿಯಲ್ಲಿ ತನ್ನ ಪ್ರಣಾಳಿಕೆಯನ್ನ ಇಂದು ಬಿಡುಗಡೆ ಮಾಡಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವ್ರ ಸಮ್ಮುಖದಲ್ಲಿ, ಒಟ್ಟು ಆರು ಗ್ಯಾರಂಟಿಗಳನ್ನ ಅನೌನ್ಸ್ ಮಾಡಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ 500 ರೂಪಾಯಿಗೆ ಎಲ್ಪಿಜಿ ಸಿಲಿಂಡರ್, 200 ಯೂನಿಟ್ವರೆಗೆ ಉಚಿತ ವಿದ್ಯುತ್, ಉನ್ನತ ಶಿಕ್ಷಣ ಪಡೆಯೋ ಪ್ರತಿ ಹೆಣ್ಣು ಮಕ್ಕಳಿಗೆ ಉಚಿತ ಸ್ಕೂಟಿ, ಮದುವೆಯಾಗೋ ಹಿಂದೂ ಹೆಣ್ಮಕ್ಕಳಿಗೆ 1 ಲಕ್ಷ ರೂ ಮತ್ತು 10 ಗ್ರಾಂ ಚಿನ್ನ ಹಾಗೂ ಅಲ್ಪಸಂಖ್ಯಾತರ ಹೆಣ್ಮಕ್ಕಳಿಗೆ 1.6 ಲಕ್ಷ ರೂ ನೀಡೋ ಭರವಸೆ ನೀಡಿದೆ. ಈ ಸಂದರ್ಭದಲ್ಲಿ ಮಾತನಾಡಿರೋ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದಲ್ಲಿ ಕಾಂಗ್ರೆಸ್ 5 ಗ್ಯಾರಂಟಿ ನೀಡಿ ಇದೀಗ ಅಲ್ಲಿನ ಜನರು ಎಲ್ಲಾ ಗ್ಯಾರಂಟಿಗಳ ಪ್ರಯೋಜನ ಪಡೀತಾ ಇದ್ದಾರೆ. ಅದೇ ರೀತಿ ತೆಲಂಗಾಣಕ್ಕೂ 6 ಗ್ಯಾರಂಟಿ ಇಟ್ಟುಕೊಂಡಿದ್ದೇವೆ. ರಾಮನ ಹೆಸರಿನಲ್ಲಿ ಮತ ಕೇಳೋರು ಏನನ್ನೂ ಮಾಡಿಲ್ಲ. ಆದ್ರೆ ಕಾಂಗ್ರೆಸ್ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸ್ತಾ ಇದೆ. ಮಹಿಳೆಯರು ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸೋ ಮೂಲಕ ಪ್ರತಿದಿನ ನಾನಾ ದೇವಸ್ಥಾನಕ್ಕೆ ಭೇಟಿ ನೀಡ್ತಾ ಇದ್ದಾರೆ ಅಂತ ಕರ್ನಾಟಕ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳನ್ನ ಹೊಗಳಿದ್ದಾರೆ.
-masthmagaa.com
Contact Us for Advertisement