ಬೆಳಗಾವಿ ಜಿಲ್ಲೆ ನಿಪ್ಪಾಣಿಯ ರಾಮಮಂದಿರಕ್ಕೆ ಬೆದರಿಕೆ ಪತ್ರ!

masthmagaa.com:

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿರೋ ರಾಮಮಂದಿರವನ್ನ ಸ್ಪೋಟಿಸ್ತೀವಿ ಅಂತ ಅನಾಮಧೇಯ ವ್ಯಕ್ತಿಗಳು ಪತ್ರ ಬರೆದಿದ್ದಾರೆ. ಮಾರ್ಚ್‌ 21ರೊಳಗೆ ದೇವಸ್ಥಾನವನ್ನ ಸ್ಪೋಟಿಸ್ತೀವಿ ಅಂತ ಈ ಪತ್ರದಲ್ಲಿ ಬೆದರಿಕೆ ಹಾಕಲಾಗಿದೆ. ಈ ವಿಚಾರ ಸದ್ದು ಮಾಡ್ತಿದ್ದಂತೆ ರಾಜ್ಯ ಬಿಜೆಪಿ ಕಾಂಗ್ರೆಸ್‌ ಸರ್ಕಾರದ ಮೇಲೆ ಮುಗಿಬಿದ್ದಿದೆ. ಕಾಂಗ್ರೆಸ್‌ನ ಓಲೈಕೆ ರಾಜಕಾರಣದಿಂದ ರಾಜ್ಯದಲ್ಲಿ ಇಂಥಹಾ ಬೆಳವಣಿಗೆಗಳಾಗ್ತಿವೆ. ಕರ್ನಾಟಕ ಭಯೋತ್ಪಾದಕರ ಅಡಗು ತಾಣ ಆಗ್ತಿದೆ ಅಂತ ಬಿಜೆಪಿ ಆರೋಪಿಸಿದೆ. ಅಲ್ಲದೆ ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ, ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ, ಈಗ ಎರಡನೇ ಬಾರಿಗೆ ನಿಪ್ಪಾಣಿ ರಾಮಮಂದಿರಕ್ಕೆ ಬೆದರಿಕೆ ಬಂದಿದೆ. ರಾಜ್ಯದಲ್ಲಿ ಸ್ಲೀಪರ್‌ ಸರ್ಕಾರ, ಭಯೋತ್ಪಾದಕ ಬ್ರದರ್ಸ್‌ ಸರ್ಕಾರ ಬಂದು ಕರ್ನಾಟಕ ತಾಲಿಬಾನ್‌ ಆಗಿದೆ. ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ರಾಜ್ಯದಲ್ಲಿ ರಾಹುಲ್‌ ಗಾಂಧಿ ದ್ವೇಷದ ಅಂಗಡಿ ಓಪನ್‌ ಮಾಡಿದ್ದಾರೆ ಅಂತ ಬಿಜೆಪಿ ವಾಗ್ದಾಳಿ ಮಾಡಿದೆ. ಅಂದ್ಹಾಗೆ ಫೆಬ್ರವರಿ 7 ಹಾಗೂ 28ರಂದು ಎರಡು ಬಾರಿ ಈ ರೀತಿಯ ಪತ್ರಗಳು ಸಿಕ್ಕಿದ್ದು, ಇದ್ರಲ್ಲಿ ಹಿಂದಿ ಭಾಷೆಯಲ್ಲಿ ಕೈಬರಹದಲ್ಲಿ ದೇವಸ್ಥಾನವನ್ನ ಸ್ಪೋಟಗೊಳಿಸೋದಾಗಿ ಬರೆಯಾಗಿದೆ ಅನ್ನೋ ಮಾಹಿತಿ ಸಿಕ್ಕಿದೆ. ಇದ್ರ ಬೆನ್ನಲ್ಲೇ ಜಿಲ್ಲಾಡಳಿತ ದೇವಸ್ಥಾನದಲ್ಲಿ 14 ಸಿಸಿಟಿವಿ ಕ್ಯಾಮೆರಾಗಳನ್ನ ಇನ್‌ಸ್ಟಾಲ್‌ ಮಾಡಿದ್ದು, ಭದ್ರತೆಗಾಗಿ ಡಿಆರ್‌ ಪೊಲೀಸರನ್ನ ನಿಯೋಜಿಸಿದೆ.

-masthmagaa.com

Contact Us for Advertisement

Leave a Reply