masthmagaa.com:
ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಇದು ಬೆಲೆಯೇರಿಕೆಯ ಅಭಿವೃದ್ಧಿ ಎಂದಿದ್ದಾರೆ. ಜೊತೆಗೆ ಬೆಲೆಯೇರಿಕೆಯ ಹೊಡೆತದಿಂದ ಅಡುಗೆಮನೆಯ ಬಜೆಟ್ಗೆ ಬೆಂಕಿ ಬಿದ್ದಿದೆ. ಡೀಸೆಲ್ ರೇಟ್ ಜಾಸ್ತಿಯಿಂದ ಅಗತ್ಯ ವಸ್ತುಗಳು ಮತ್ತು ತರಕಾರಿ ಬೆಲೆ ಜಾಸ್ತಿಯಾಗಿದೆ.
ಕೊರೋನಾ ಜೊತೆಗೆ ಈಗ ಬೆಲೆಯೇರಿಕೆಯಿಂದ ಜನ ಪರದಾಡ್ತಿದ್ದಾರೆ ಅಂತೆಲ್ಲಾ ಬರೆದಿರುವ ಒಂದು ಇಮೇಜ್ ಕೂಡ ಶೇರ್ ಮಾಡಿದ್ದಾರೆ. ಇನ್ನು ರಾಜ್ಯಸಭೆ ವಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಮಲ್ಲಿಕಾರ್ಜುನ ಖರ್ಗೆ ಕೂಡ, ನಾವು ವಿಪಕ್ಷದಲ್ಲಿ ಇದ್ದೇವೆ ಅಂತ ಸರ್ಕಾರವನ್ನು ಟೀಕಿಸುತ್ತಿಲ್ಲ. ಸರ್ಕಾರದ ನಿರ್ಧಾರಗಳಿಂದ ಜನಸಾಮಾನ್ಯರಿಗೆ ತೊಂದ್ರೆಯಾಗುತ್ತಿದೆ. ಹೀಗಾಗಿ ವಿರೋಧಿಸುತ್ತಿದ್ದೇವೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement