ಆಪ್‌ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ ವಂಚಕ ಸುಕೇಶ್‌! ಏನದು?

masthmagaa.com:

ಜೈಲಿನಲ್ಲಿರೋ ವಂಚಕ ಸುಕೇಶ್‌ ಚಂದ್ರಶೇಖರ್‌ ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅವ್ರಿಗೆ ಪತ್ರ ಬರೆಯೋ ಮೂಲಕ ಮತ್ತೆ ಆಪ್‌ ನಾಯಕರ ಮೇಲೆ ಆರೋಪ ಮಾಡಿದ್ದಾನೆ. ಮನಿ ಲಾಂಡರಿಂಗ್‌ ಕೇಸ್‌ನಲ್ಲಿ ತಿಹಾರ್‌ ಜೈಲಿನಲ್ಲಿರೋ ಆಪ್‌ ನಾಯಕ ಸತ್ಯೇಂದ್ರ ಜೈನ್‌ ನನಗೆ ಕೊನೆ ಅವಕಾಶ ನೀಡಿದ್ರು, ನನ್ನ ಬಳಿ ಇರೋ ಎಲ್ಲಾ ಎವಿಡೆನ್ಸ್‌ಗಳನ್ನ ಒಪ್ಪಿಸೋಕೆ ತಿಳಿಸಿದ್ರು. ಈ ರೀತಿ ಏನಾದ್ರು ಮಾಡಿದ್ರೆ ಕರ್ನಾಟಕದ ಅಸೆಂಬ್ಲಿ ಎಲೆಕ್ಶನ್‌ನಲ್ಲಿ ಸೀಟ್‌ಗಳನ್ನ ಮಾರಾಟ ಮಾಡೋ ಕೆಲಸ ಮತ್ತು ಪಂಜಾಬ್‌ನಲ್ಲಿ ಮರಳಿನ ಗಣಿಗಾರಿಕೆ ಮಾಡೋಕೆ ಕಾಂಟ್ರಾಕ್ಟ್‌ ಕೊಡಿಸೋದಾಗಿ ಹೇಳಿದ್ರು. ಅಷ್ಟೇ ಅಲ್ದೆ ನನ್ನ ಎಲ್ಲಾ ಹೇಳಿಕೆಗಳನ್ನ ಹಿಂಪಡೆಯೋಕೆ 48 ಗಂಟೆಗಳ ಡೆಡ್‌ಲೈನ್‌ ನೀಡಿದ್ರು. ಇದಕ್ಕೆ ನಾನು ಒಪ್ಪದೇ ಹೋದ್ರೆ ಚಿತ್ರ ಹಿಂಸೆ ಕೊಡಲಾಗುತ್ತೆ ಹಾಗೂ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ಗೆ ಬಂದ ಸ್ಥಿತಿ ನಿನಗೂ ಬರುತ್ತೆ ಅಂತ ಬೆದರಿಕೆ ಹಾಕಿದ್ರು ಅಂತ ಸುಕೇಶ್‌ ತನ್ನ ಪತ್ರದಲ್ಲಿ ಆರೋಪಿಸಿದ್ದಾನೆ.

-masthmagaa.com

Contact Us for Advertisement

Leave a Reply