ಐವರು ಟಿಎಂಸಿ ಸಂಸದರ ರಾಜೀನಾಮೆ..? ಬಿಜೆಪಿ ಸೇರ್ಪಡೆ..!

masthmagaa.com:

ಪಶ್ಚಿಮ ಬಂಗಾಳ: ಮುಂದಿನ ವರ್ಷ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳದಲ್ಲಿ ಈಗಲೇ ರಾಜಕೀಯ ಜೋರಾಗಿದೆ. ಈ ನಡುವೆ ಟಿಎಂಸಿಯ ಸೌಗತ ರಾಯ್ ಮತ್ತು ನಾಲ್ವರು ಸಂಸದರು ರಾಜೀನಾಮೆ ನೀಡಿ ಬಿಜೆಪಿ ಸೇರಲಿದ್ದಾರೆ ಅಂತ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಹೊಸ ಬಾಂಬ್ ಸಿಡಿಸಿದ್ದಾರೆ.

ಟಿಎಂಸಿಯ ಮತ್ತೋರ್ವ ನಾಯಕ ಸುಬೇಂದು ಅಧಿಕಾರಿ ಬಗ್ಗೆ ಮಾತನಾಡಿದ ಅರ್ಜುನ್ ಸಿಂಗ್​, ಸೌಗತ ರಾಯ್ ಸುಬೇಂದು ಅವರ ಜೊತೆಯೂ ಮಾತನಾಡಿದ್ದು, ಲಿಸ್ಟ್​ನಲ್ಲಿ ಅವರ ಹೆಸರು ಕೂಡ ಸೇರ್ಪಡೆಯಾಗಲಿದೆ ಅಂತ ಹೇಳಿದ್ದಾರೆ. ಸುಬೇಂದು ಅಧಿಕಾರಿ ದೊಡ್ಡ ನಾಯಕ.. ಸುಬೇಂದು ಮತ್ತು ಇತರೆ ನಾಯಕರ ಸಹಾಯದಿಂದ ಮಮತಾ ಬ್ಯಾನರ್ಜಿ ದೊಡ್ಡ ನಾಯಕಿಯಾಗಿದ್ದಾರೆ. ಆದ್ರೆ ಅದನ್ನೆಲ್ಲಾ ಮರೆತ ಮಮತಾ ಈಗ ತನ್ನಅಳಿಯನನ್ನು ಕುರ್ಚಿ ಮೇಲೆ ಕೂರಿಸಲು ನೋಡ್ತಿದ್ದಾರೆ. ಸುಬೇಂದು ಅಧಿಕಾರಿಯವರು ಬಿಜೆಪಿಗೆ ಬಂದ್ರೂ ಸ್ವಾಗತ ಅಂತ ಹೇಳಿದ್ದಾರೆ.

ಸೌಗತ ರಾಯ್ ಟಿಎಂಸಿಯ ಪ್ರಮುಖ ನಾಯಕರಾಗಿದ್ದು, ಸದ್ಯ 4ನೇ ಬಾರಿಗೆ ಸಂಸದರಾಗಿದ್ದಾರೆ. ಇದಕ್ಕೂ ಮುನ್ನ 5 ಬಾರಿ ಶಾಸಕರಾಗಿಯೂ ಆಯ್ಕೆಯಾಗಿದ್ರು.

-masthmagaa.c0m

Contact Us for Advertisement

Leave a Reply