ಸಾವರ್ಕರ್‌ಗೆ ಅಗೌರವ ತೋರುವುದನ್ನ ನಿಲ್ಲಿಸಿ ಎಂದು ರಾಹುಲ್‌ಗೆ ತಾಕೀತು ಮಾಡಿದ ಉದ್ಧವ್‌ ಠಾಕ್ರೆ!

masthmagaa.com:

ವಿ.ಡಿ ಸಾವರ್ಕರ್‌ ಅವ್ರನ್ನ ಅವಮಾನ ಮಾಡ್ಬೇಡಿ, ಇದ್ರಿಂದ ಪ್ರತಿಪಕ್ಷಗಳ ಐಕ್ಯತೆಯಲ್ಲಿ ಬಿರುಕು ಉಂಟಾಗ್ಬೋದು ಅಂತ ಶಿವಸೇನಾ ನಾಯಕ ಉದ್ಧವ್‌ ಠಾಕ್ರೆ ರಾಹುಲ್‌ ಗಾಂಧಿಗೆ ಎಚ್ಚರಿಕೆ ನೀಡಿದ್ದಾರೆ. ಸಂಸತ್‌ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ಸುದ್ಧಿಗೋಷ್ಠಿ ನಡೆಸಿದ್ದ ರಾಹುಲ್‌, ನನ್ನ ಹೆಸರು ಸಾರ್ವಕರ್‌ ಅಲ್ಲ. ನನ್ನ ಹೆಸರು ಗಾಂಧಿ, ಗಾಂಧಿ ಕ್ಷಮೆ ಕೇಳಲ್ಲ ಅಂತ ಹೇಳಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿರೊ ಉದ್ಧವ್‌ ಠಾಕ್ರೆ , ಸಾವರ್ಕರ್‌ ಅವ್ರು ನಮ್ಮ ದೇವರು.. ಅವರ ಬಗ್ಗೆ ಅಗೌರವ ತೋರಿಸೋದನ್ನ ನಾವು ಸಹಿಸಲ್ಲ. ಒಂದು ವೇಳೆ ರಾಹುಲ್‌ ಅವ್ರು ಸಾವರ್ಕರ್‌ ಅವ್ರನ್ನ ಅವಮಾನ ಮಾಡೋದನ್ನ ಕಂಟಿನ್ಯೂ ಮಾಡಿದ್ರೆ ವಿರೋಧಪಕ್ಷಗಳ ಒಗ್ಗಟ್ಟಿಲ್ಲಿ ಬಿರುಕು ಮೂಡುತ್ತೆ ಅಂತ ವಾರ್ನ್‌ ಮಾಡಿದ್ದಾರೆ. ಅಂದ್ರೆ ನಿಮ್ಮ ಜೊತಗೆ ನಾವು ಮೈತ್ರಿ ಮಾಡಿಕೊಳ್ಳಲ್ಲ ಅಂತ. ಯಾಕಂದ್ರೆ ಈ ಹಿಂದೆ ಅವರು ಮಹಾರಾಷ್ಟ್ರದಲ್ಲಿ ಅಗಾಡಿ ಸರ್ಕಾರ ಮಾಡಿಕೊಂಡಿದ್ರಲ್ಲ ಅದಕ್ಕೆ. ಇತ್ತ ರಾಹುಲ್‌ರ ಸಾವರ್ಕರ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌, ರಾಹುಲ್‌ ಅವರು ಕನಸಿನಲ್ಲಿಯೂ ಸಾವರ್ಕರ್‌ ಅಗೋಕೆ ಸಾಧ್ಯವಿಲ್ಲ. ಸಾವರ್ಕರ್‌ ಆಗಲು ಬಲವಾದ ಡಿಟರ್ಮಿನೇಶನ್‌, ಭಾರತದ ಮೇಲೆ ಪ್ರೀತಿ, ನಿಸ್ವಾರ್ಥತೆ ಮತ್ತು ಕಮಿಟ್‌ಮೆಂಟ್‌ನ ಅಗತ್ಯವಿದೆ ಅಂತ ತಿರುಗೇಟು ನೀಡಿದ್ದಾರೆ. ಕೇಂದ್ರ ಸಚಿವ ಹರ್ದಿಪ್‌ ಸಿಂಗ್‌ ಪುರಿ ಪ್ರತಿಕ್ರಿಯಿಸಿ ಕುದುರೆಗಳು ಓಡುವ ಜಾಗದಲ್ಲಿ ಕತ್ತೆ ಸಿಗ್ತಾಯಿದೆ ಅಂತ ರಾಹುಲ್‌ ವಿರುದ್ದ ಮತ್ತೊಂದು ಹಂತದಲ್ಲಿ ವಾಗ್ದಾಳಿ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply