ದೊಡ್ಮನೆ ಆಸ್ತಿ ನಿಮಗೆ ಕೊಡಲ್ಲ ಅಂತ ದರ್ಶನ್ ಗೆ ಹೇಳಿದ್ದೆ: ಉಮಾಪತಿ!

masthmagaa.com:

ನಟ ದರ್ಶನ್ ಅವರ ವಂಚನೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಮತ್ತೊಂದು ಸ್ಪೋಟಕ ಮಾಹಿತಿ ಸಿಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿರುವ ನಿರ್ಮಾಪಕ ಉಮಾಪತಿ. ನಮ್ಮಿಬ್ಬರ ಮಧ್ಯೆ ಆಸ್ತಿ ವಿಚಾರ ಬಂದಿದ್ದು ನಿಜ, ನಾನು ಪುನೀತ್ ರಾಜ್ ಕುಮಾರ್ ಅವರಿಂದ ಒಂದು ಆಸ್ತಿ ಖರೀದಿಸಿದ್ದೆ. ಆ ಆಸ್ತಿ ಪುನೀತ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರಿಗೆ ಸೇರಿದ್ದು, ಅದನ್ನ ನನಗೆ ಕೊಡಿ ಅಂತ ದರ್ಶನ್ ಕೇಳಿದ್ದರು. ಅದು ದೊಡ್ಡ ಮನೆಯವರ ಆಸ್ತಿ, ಹಾಗಾಗಿ ನಾನು ಅದನ್ನು ಕೊಡೊದಿಲ್ಲ ಎಂದು ಹೇಳಿದ್ದೆ, ಅಲ್ಲಿಗೆ ದರ್ಶನ್ ಸುಮ್ಮನಾಗಿದ್ದರು.

ಆಸ್ತಿಯನ್ನು ನಾನು ಕೊಡೋದಿಲ್ಲ ಎಂದಿದ್ದು ನಿಜ, ಅದಕ್ಕೆ ದರ್ಶನ್ ಬೇಜಾರಾಗಿಲ್ಲ ಅಂದುಕೊಂಡಿದ್ದೇನೆ, ನನ್ನ ಮತ್ತು ದರ್ಶನ್ ನಡುವೆ ಏನೇನೋ ನಡೆದಿರುತ್ತದೆ, ದೊಡ್ಡಮನೆಯವರ ಆಸ್ತಿಯನ್ನು ದರ್ಶನ್ ಅವರಿಗೆ ಕೊಟ್ಟರೇ ಸರಿ ಆಗುತ್ತಾ ನೀವೆ ಯೋಚಿಸಿ ಅಂತ ಮಾಧ್ಯಮಗಳನ್ನ ಪ್ರಶ್ನಿಸಿದ್ದಾರೆ.

-masthmagaa.com

Contact Us for Advertisement

Leave a Reply